-ಕಂಟ್ರೋಲ್ಗೆ ಸಿಗದ ಮಹಾಮಾರಿ
ಬೆಂಗಳೂರು: ಇಂದು ಸಹ ಕೊರೊನಾ ವೈರಸ್ ರಾಜ್ಯದಲ್ಲಿ 9 ಸಾವಿರದ ಗಡಿ ದಾಡಿದೆ. ಇಂದು ರಾಜ್ಯದಲ್ಲಿ 9,217 ಮಂದಿಗೆ ಸೋಂಕು ತಗುಲಿದ್ರೆ, 7,021 ರೋಗಿಗಳು ಗುಣಮುಖರಾಗಿಗೆ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾಗೆ 129 ಮಂದಿಗೆ ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 6,937ಕ್ಕೆ ಏರಿಕೆಯಾಗಿದೆ. ಸದ್ಯ 768 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,01,537 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 4,30,947ಕ್ಕೆ ಏರಿಕೆ ಆಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 77, ಬಳ್ಳಾರಿ 375, ಬೆಳಗಾವಿ 263, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 3,161, ಬೀದರ್ 98, ಚಾಮರಾಜನಗರ 62, ಚಿಕ್ಕಬಳ್ಳಾಪುರ 167, ಚಿಕ್ಕಮಗಳೂರು 111, ಚಿತ್ರದುರ್ಗ 142, ದಕ್ಷಿಣ ಕನ್ನಡ 350, ದಾವಣಗೆರೆ 297, ಧಾರವಾಡ 264, ಗದಗ 180, ಹಾಸನ 218, ಹಾವೇರಿ 190, ಕಲಬುರಗಿ 243, ಕೊಡಗು 61, ಕೋಲಾರ 104, ಕೊಪ್ಪಳ 139, ಮಂಡ್ಯ 249, ಮೈಸೂರು 635, ರಾಯಚೂರು 107, ರಾಮನಗರ 126, ಶಿವಮೊಗ್ಗ 549, ತುಮಕೂರು 365, ಉಡುಪಿ 227, ಉತ್ತರ ಕನ್ನಡ 214, ವಿಜಯಪುರ 63 ಮತ್ತು ಯಾದಗಿರಿಯಲ್ಲಿ 103 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 10/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/NgDetuxHey pic.twitter.com/QxQFvuDtoa
— Karnataka Health Department (@DHFWKA) September 10, 2020

Leave a Reply