ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಮಧ್ಯೆ ಫೈಟ್ ನಡೆಯುತ್ತಲೇ ಇರುತ್ತೆ. ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತಾರೆ. ಅದೇ ರೀತಿ ಇಂದೂ ಸಹ ಫುಲ್ ಜಗಳವಾಡಿದ್ದಾರೆ.

ವೈಷ್ಣವಿ ಸಂಬಂಧ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಮತ್ತೆ ಜಗಳವಾಡಿಕೊಂಡಿದ್ದು, ಚಕ್ರವರ್ತಿಯವರು ನಮಕ್ ಹರಾಮ್ ಎಂದೆಲ್ಲ ಬೈದಿದ್ದಾರೆ. ಅಲ್ಲದೆ ಅವಾಚ್ಯ ಶಬ್ಧಗಳಿಮದ ಸಹ ನಿಂದಿಸಿದ್ದಾರೆ. ಟಾಸ್ಕ್ ವಿಚಾರವಾಗಿ ಸಂಬರಗಿ ವೈಷ್ಣವಿಗೆ ಸಲಹೆ ನೀಡಿದ್ದರ ಬಗ್ಗೆ ಮಾತನಾಡಿದ್ದನ್ನು ಚಕ್ರವರ್ತಿ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸಂಬರಗಿ ವೈಷ್ಣವಿ ಬಳಿ ಕೇಳಿದ್ದು, ನಾನು ಆ ರೀತಿ ಹೇಳಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

ಇಷ್ಟಕ್ಕೇ ಸಂಬರಗಿ ಇಬ್ಬರ ಸಂಬಂಧ ಹಾಳು ಮಾಡಬೇಡ, ವೈಷ್ಣವಿ ಬಗ್ಗೆ ನನಗೆ ಗೌರವ ಇದೆ. ಹೀಗೆ ಹೇಲಬೇಡ ಎಂದಿದ್ದಾರೆ. ಆಗ ನನಗೇಕೆ ಬುದ್ಧಿವಾದ ಹೇಳೋಕೆ ಬರ್ತಿಯಾ ನೀನು ನಿನ್ನ ಪಾಡಿಗೆ ಇರು ಎಂದು ಚಕ್ರವರ್ತಿ ಕಿರಿಚಿದ್ದಾರೆ. ಇಂತಹ ಹೊಲಸು ಕೆಲಸ ಮಾಡಬೇಡ, ನಾನು ಕೇಳಬೇಡ ಎಂದರು ವೈಷ್ಣವಿ ಬಳಿ ಯಾಕೆ ಕೇಳಿದೆ. ಇದು ಹೊಲಸು ಕೆಲಸ ಎಂದು ಚಕ್ರವರ್ತಿ ಫುಲ್ ರಾಂಗ್ ಆಗಿದ್ದಾರೆ.

ಪರ್ಸನಲ್ ಆಗಿ ಮಾತನಾಡಿದ್ದನ್ನು ಮತ್ತೆ ಯಾರ ಬಳಿಯೂ ಕೇಳಬಾರದು, ಅದಕ್ಕೆ ಸ್ನೇಹ ಅನ್ನಲ್ಲ, ನೀನು ನನ್ನ ಬಳಿ ಅರವಿಂದ ಹಾಗೂ ದಿವ್ಯಾ ಉರುಡುಗ ಬಗ್ಗೆ ಮಾತನಾಡಿದ್ದನ್ನು ಹೇಳಬೇಕಾ, ತಾಕತ್ ಇದ್ದರೆ ರಘು, ದಿವ್ಯಾ ಉರುಡುಗ, ಅರವಿಂದ್ ಬಗ್ಗೆ ಮಾತನಾಡಿದ್ದನ್ನು ಹೇಳು ಬಾ ಎಂದು ರೇಗಿದ್ದಾರೆ.

ನಾನು ಒಬ್ಬ ಅಪ್ಪ, ಅಮ್ಮಂಗೆ ಹುಟ್ಟಿದ್ದೇನೆ, ಸರಿಯಾಗಿಯೇ ಮಾತನಾಡಿದ್ದೇನೆ ಎಂದು ಜೋರಾಗಿ ಮಾತನಾಡಿದ್ದಾರೆ. ಬಳಿಕ ಪ್ರಶಾಂತ್ ಸಂಬರಗಿ ವೈಷ್ಣವಿ ಬಳಿ ಮಾತನಾಡಿದ್ದು, ನಾನು ನಿನ್ನನ್ನು ತುಂಬಾ ಗೌರವಿಸುತ್ತೇನೆ, ಎಮೋಶನಲಿ ಕನೆಕ್ಟ್ ಆಗಿದ್ದೇನೆ. ಎತ್ತರದ ಸ್ಥಾನದಲ್ಲಿ ಇಟ್ಟಿದ್ದೇನೆ. ಒಬ್ಬ ವ್ಯಕ್ತಿ ನೀವು ನನಗೆ ಈ ರೀತಿ ಮಾಡಿದ್ದೀರಿ ಎಂದರೆ ಬೇಜಾರಾಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ. ಪ್ರಶಾಂತ್ ಫುಲ್ ಎಮೋಶನ್ ಆಗಿದ್ದಾರೆ. ಅಲ್ಲದೆ ವೈಷ್ಣವಿ ಹೀಗೆ ಹೇಳಿದ್ದಾರಾ, ಅವರನ್ನೇ ಕೇಳಲಾ ಎಂದು ನಾನು 3 ಬಾರಿ ಕೇಳಿದೆ. ನೀನು ಆ ರೀತಿ ಮಾಡಲ್ಲ ಎಂದು ನನಗೆ ಖಂಡಿತವಾಗಿಯೂ ಗೊತ್ತಿತ್ತು. ಆದರೂ ಖಚಿತಪಡಿಸಿಕೊಂಡೆ ಎಂದಿದ್ದಾರೆ. ಈ ಮೂಲಕ ವೈಷ್ಣವಿಗೆ ಸಂಬರಗಿ ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *