ಮಂಜು ಮುಖಕ್ಕೆ ಉಗಿದ ದಿವ್ಯಾ ಸುರೇಶ್

ಮಂಜು, ದಿವ್ಯಾ ಸುರೇಶ್ ಆತ್ಮೀಯ ಸ್ನೇಹಿತರಾಗಿದ್ದಾರೆ. ಆರಂಭದ ದಿನದಿಂದಲೂ ದಿವ್ಯಾ ಸುರೇಶ್ ಹಿಂದೆ ತಮಾಷೆಯಾಗಿ ಮಂಜು ಪಾವಗಡ ಬಿದ್ದಿದ್ದರು. ಈ ಜೋಡಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮಂಜು ಮುಖಕ್ಕೆ ಉಗಿಸಿಕೊಂಡು ಸುಮ್ಮನೇ ಆಗಿದ್ದಾರೆ.

ಮಂಜು ಹಾಗೂ ದಿವ್ಯಾ ಸುರೇಶ್ ಮಧ್ಯೆ ಸಣ್ಣ ಸಣ್ಣ ಭಿನ್ನಾಭಿಪ್ರಾಯದ ಹೊಗೆ ಆಡುತ್ತಿದೆ. ಮಂಜು ಹತ್ತಿರ ಚಿಕ್ಕ ಚಿಕ್ಕ ವಿಷಯಕ್ಕೆ ಬೇಸರ ಮಾಡಿಕೊಂಡು ದಿವ್ಯಾ ಅಳುತ್ತಿದ್ದಾರೆ. ಕೆಲವೊಮ್ಮೆ ಮಂಜು ಕೂಡ ದಿವ್ಯಾರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ನಡುವೆ ಪ್ರಶಾಂತ್ ಸಂಬರಗಿ ಅವರು ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಮಧ್ಯೆ ಮನಸ್ತಾಪ ತೋರುವಂತಹ ಮಾತುಗಳನ್ನು ಆಡುತ್ತಿದ್ದಾರೆ. ಇಬ್ಬರು ಸ್ನೇಹಿತರ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೆ ಬೇಸರ ಮಾಡಿಕೊಳ್ಳುವುದು ಶುರುವಾಗಿದೆ.

ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಕೊನೆಯಲ್ಲಿ ಕೆಪಿ ಅರವಿಂದ್ ಹಾಗೂ ದಿವ್ಯಾ ಸುರೇಶ್ ಉಳಿದುಕೊಂಡಿದ್ದರು. ಆಗ ನೀರು ಕುಡಿಸು ಅಂತ ಅರವಿಂದ್ ಅವರು ಮಂಜು ಬಳಿ ಹೇಳಿದ್ದಾರೆ. ಆಗ ದಿವ್ಯಾಗೆ ಉಗಿದುಬಿಡು ಅಂತ ಹೇಳಿದ್ದರು.

ದಯವಿಟ್ಟು ಒಬ್ಬರು ಮಾತನಾಡಿಕೊಂಡು ಆಟ ನಿಲ್ಲಿಸಿಬಿಡಿ ಅಂತ ಮಂಜು ಹೇಳಿದ್ದರು. ನೀರು ಕುಡಿಸಲು ಮಂಜು ಬಂದಾಗ ದಿವ್ಯಾ ಸುರೇಶ್ ನೀರು ಕುಡಿಸಿದ ನಂತರದಲ್ಲಿ ಮಂಜು ಮುಖಕ್ಕೆ ಉಗಿದಿದ್ದಾರೆ. ಪಾಪ ಅಂತ ನೀರು ಕುಡಿಸಿದರೆ ಉಗಿದ್ರು ಅಂತ ಮಂಜು ಹೇಳಿದ್ದರು. ಈ ವೇಳೆ ದಿವ್ಯಾ ಉರುಡುಗ ಮಂಜು ನೀನು ಅವರಿಗೆ ತೊಂದರೆ ಮಾಡಬೇಡಾ ಬಾ ಎಂದು ಕರೆದಿದ್ದಾರೆ. ಆಗ ಮಂಜು ನನಗೆ ಇವರು ಮುಖಕ್ಕೆ ನೀರು ಉಗಿದದ್ದು ಗೊತ್ತಾಗಲಿಲ್ಲ ಅಲ್ಲವಾ ಎಂದು ಹೇಳಿದ್ದಾರೆ. ಮುಖಕ್ಕೆ ನೀರು ಉಗಿದಿರುವ ವಿಚಾರವನ್ನು ಒಟ್ಟಿನಲ್ಲಿ ಎಲ್ಲರೂ ತಮಾಷೆಯಾಗಿ ಸ್ವೀಕರಿಸಿದ್ದಾರೆ.

Comments

Leave a Reply

Your email address will not be published. Required fields are marked *