ಮಂಜನ ಅಪ್ಪ, ಅಮ್ಮನ ಜೊತೆ ಮದುವೆ ಬಗ್ಗೆ ಮಾತನಾಡಿದ್ದೇನೆ: ದಿವ್ಯಾ ಸುರೇಶ್

ಬಿಗ್‍ಬಾಸ್ ಸೀಸನ್-8 ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಕಿಚ್ಚ ಸುದೀಪ್ ಅವರು ಅರವಿಂದ್ ಮದುವೆಗಿಂತ ಮೊದಲು ಮಂಜನ ಮದುವೆಯಾಗುತ್ತೆ ಎಂದು ಕೇಳಿದರು. ಅದಕ್ಕೆ ಒಂದಿಬ್ಬರು ಹೊರತುಪಡಿಸಿ ಎಲ್ಲರೂ ಯಸ್ ಎಂದು ಹೇಳಿದರು.

ಇದೇ ವೇಳೆ ಸುದೀಪ್ ಯಸ್ ಯಾಕೆ ದಿವ್ಯಾ ಸುರೇಶ್ ಎಮದು ಕೇಳಿದಾಗ, ನಾನು ಅವರ ಅಪ್ಪ-ಅಮ್ಮ ಜೊತೆ ಮದುವೆ ವಿಚಾರ ಮಾತನಾಡಿದ್ದೇನೆ. ಆಗ ಅವರು ಅವನು ಆಡುತ್ತಿರುವ ರೇಂಜ್ ನೋಡಿದರೆ ಶೋ ಮುಗಿಸಿ ಬಂದ ಕೊಡಲೇ ಮದುವೆಯಾಗುತ್ತಾನೆ ಎಂದು ಹೇಳಿದ್ದಾಗಿ ತಿಳಿಸಿದರು. ಇದನ್ನೂ ಓದಿ: ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

ಆಗ ಕಿಚ್ಚ ಆ ರೇಂಜ್ ಅಂದ್ರೆ ಏನ್ ನೋಡಿದ್ರು ಅವರು ಎಂದು ಕೇಳಿದಕ್ಕೆ ದಿವ್ಯಾ, ಯಾವಾಗಲೂ ಮದುವೆಯಾಗಬೇಕು, ಮದುವೆ ಆಗಬೇಕು ಎಂದು ಹೇಳುತ್ತಿರುತ್ತಾರೆ. ಅದಕ್ಕೆ ಬಂದ ಕೂಡಲೇ ಆಗಬಹುದು ಎಂದು ಹೇಳಿದೆ ಎಂದರು. ಇದನ್ನೂ ಓದಿ: ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್..!

ಇತ್ತ ರಾಜೀವ್ ಅವರು ಈ ಬಗ್ಗೆ ಮಾತನಾಡಿ, ಹೌದು ಅಣ್ಣ ಮಂಜಗೆ ತುಂಬಾ ಆಸೆ ಇದೆ. ಅದರಲ್ಲಿ ಮದುವೆಯಾಗಬೇಕು ಎಂಬುದು ಟಾಪ್‍ನಲ್ಲಿದೆ. ಅದಕ್ಕೆ ಅವರು ಆಚೆ ಬಂದ ತಕ್ಷಣ ಮದುವೆಯಾಗುತ್ತಾರೆ. ರಾಜೀವ್ ಮಾತಿಗೆ ಅರವಿಂದ್ ಸಹ ದನಿಗೂಡಿಸಿದ್ದು, ಹೌದು ಸರ್ ತುಂಬಾ ಅಜೆರ್ಂಟ್‍ನಲ್ಲಿದ್ದಾನೆ. ಬೇಗ ಮದುವೆಯಗುತ್ತಾನೆ ಎಂದು ತಮಾಷೆ ಮಾಡಿ ಎಲ್ಲಾ ಸ್ಪರ್ಧಿಗಳು ಮಂಜನ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

ನಂತರ ಮಂಜ ಅವರ ತಾಯಿಯ ಬಳಿ ಕಿಚ್ಚ ಮಾತನಾಡಿ, ಯಾವಾಗ ಮದುವೆ ಮಾಡಿಸುತ್ತೀರಾ ಅಮ್ಮ ಎಂದು ಕೇಳಿದಕ್ಕೆ, ಅವನು ಹೊರಗೆ ಬಂದು ಯಾವಾಗ ಇಷ್ಟ ಪಡುತ್ತಾನೆ ಆಗ ಮದುವೆ ಮಾಡಿಸುತ್ತೇವೆ ಎಂದರು. ಅದಕ್ಕೆ ಸುದೀಪ್ ಬೇಡ ಅವರು ಬಂದ ತಕ್ಷಣ ಮದುವೆ ಮಾಡಿಬಿಡಿ. ನೋಡಿ ಫುಲ್ ರೆಡಿಯಾಗಿ, ಚೆನ್ನಾಗಿ ಹಲ್ಲು ಉಜ್ಜಿಕೊಂಡಿದ್ದಾರೆ. ಹುಡುಗಿಯನ್ನ ಹುಡುಕಲು ಹೋಗುವಾಗ ಶುಭಾ ಮತ್ತೆ ಚಕ್ರವರ್ತಿ ಅವರನ್ನು ಕರೆದುಕೊಂಡು ಹೋಗಿ ಎಂದು ತಮಾಷೆ ಮಾಡಿದ್ದಾರೆ. ಕಿಚ್ಚನ ಮಾತಿಗೆ ನೆರೆದಿದ್ದವರು ಜೋರಾಗಿ ನಕ್ಕಿದ್ದಾರೆ.

Comments

Leave a Reply

Your email address will not be published. Required fields are marked *