ಭದ್ರಾವತಿ ಕ್ಷೇತ್ರಕ್ಕಾಗಿ ಕಾಂಗ್ರೆಸ್- ಬಿಜೆಪಿ ಮಧ್ಯೆ ಫೈಟ್

ಶಿವಮೊಗ್ಗ: ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿಗೌಡ ನಿಧನ ಬಳಿಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್, ಬಿಜೆಪಿ ಮಧ್ಯೆ ರಾಜಕೀಯ ಮೇಲಾಟ ಜೋರಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆ ಆಗಿರುವ ಭದ್ರಾವತಿಯಲ್ಲಿ ಖಾತೆ ತೆರೆಯಲು ಬಿಜೆಪಿ ಕಸರತ್ತು ಮಾಡುತ್ತಿದೆ. ಭದ್ರಾವತಿ ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿಗೌಡ ನಿಧನ ಬಳಿಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಪಣ ತುಟ್ಟು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಬಿಜೆಪಿ ಕಳೆದ ಆರು ತಿಂಗಳಿಂದಲೂ ಎಲ್ಲ ಅವಕಾಶಗಳನ್ನೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಕಳೆದ ಫೆ.28 ರಂದು ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ ಬಳಿಕ ಬಿಜೆಪಿಗೆ ಕಾಂಗ್ರೆಸ್ ಟಾರ್ಗೆಟ್ ಆಗಿದೆ. ಶಾಸಕ ಸಂಗಮೇಶ್ ಜೊತೆ ಬಿಜೆಪಿ ಜಟಾಪಟಿಗಿಳಿದಿದೆ. ಈಗಾಗಲೇ ಸಂಗಮೇಶ್ ಪರವಾಗಿ ಕಾಂಗ್ರೆಸ್ ಪಡೆ ನಿಂತಿದೆ.

ಕಾಂಗ್ರೆಸ್ ಭದ್ರಾವತಿಯಲ್ಲಿ ಕಮಲ ಅರಳಲು ಬಿಡದಿರಲು ಪಣ ತೊಟ್ಟು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಭದ್ರಾವತಿಯಲ್ಲಿ ನಡೆಯುತ್ತಿರುವ ಸ್ಪರ್ಧೆ ಬಜೆಟ್ ಅಧಿವೇಶನದ ಮೇಲೂ ಪರಿಣಾಮ ಬೀರಿದೆ. ಸಂಗಮೇಶ್‍ಗಾಗಿ ಸದನದಲ್ಲಿ ನಿತ್ಯ ಧರಣಿ, ಸಭಾತ್ಯಾಗ ನಡೆಸುತ್ತಿರುವ ಕಾಂಗ್ರೆಸ್ ಈ ರಾಜಕೀಯ ಮೇಲಾಟದಲ್ಲಿ ಯಾರ ಕೈ ಮೇಲಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *