ಬ್ರಾಹ್ಮಣ ಸಮುದಾಯವನ್ನ ಅವಮಾನಿಸಿರುವುದು ಖಂಡನಾರ್ಹ – ಮಂತ್ರಾಲಯ ಶ್ರೀ

ರಾಯಚೂರು: ಪೊಗರು ಸಿನೆಮಾದಲ್ಲಿ ಬ್ರಾಹ್ಮಣ ಸಮುದಾಯವನ್ನ ಅವಮಾನಿಸಿರುವುದು ಖಂಡನಾರ್ಹ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಶ್ರೀಗಳು ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ನೋವುಂಟುಮಾಡುವ ದೃಶ್ಯಗಳಿರುವುದು ಖಂಡನಾರ್ಹ ಎಂದಿದ್ದಾರೆ. ಚಲನಚಿತ್ರ, ಕಿರುತೆರೆ ಮೂಲಕ ಯಾವುದೇ ಸಮುದಾಯದ ಅವಹೇಳನೆ ಸರಿಯಲ್ಲ. ಅಂತಹ ಭಾಗಗಳನ್ನ ಸೆನ್ಸಾರ್ ಮಂಡಳಿ ಕಿತ್ತು ಹಾಕಬೇಕು. ಸೆನ್ಸಾರ್ ಮಂಡಳಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಈ ಕುರಿತಾಗಿ ಎಚ್ಚರವಹಿಸಬೇಕು. ಆಕ್ಷೇಪಾರ್ಹ ಭಾಗವನ್ನು ತೆಗೆಯುವ ಭರವಸೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿದೆ. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕ್ಷಮೆಯನ್ನೂ ಕೇಳಿದ್ದಾರೆ ಎಂದಿದ್ದಾರೆ.

ಬ್ರಾಹ್ಮಣ ಸಮುದಾಯದವರು ಯಾವುದೇ ಆವೇಶಕ್ಕೆ ಒಳಗಾಗಬಾರದು. ಶಾಂತಿಯನ್ನು ಕದಡುವ ಕಾರ್ಯದಲ್ಲಿ ತೊಡಗಬಾರದು ಎಂದು ಸುಬುಧೇಂದ್ರತೀರ್ಥ ಸ್ವಾಮಿ ಬ್ರಾಹ್ಮಣ ಸಮಾಜದವರಿಗೆ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *