ಬ್ರಾಹ್ಮಣ ವೃದ್ಧರೊಬ್ಬರ ಅಂತ್ಯ ಸಂಸ್ಕಾರ ಮಾಡಿ ಮಾದರಿಯಾದ ಆಸೀಫ್

ಮಂಗಳೂರು: ಅನಾರೋಗ್ಯದಿಂದ ನಿಧನ ಹೊಂದಿದ ಬ್ರಾಹ್ಮಣ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಸುವ ಮೂಲಕ ಮುಸ್ಲಿಂ ಸಮುದಾಯದ ವ್ಯಕ್ತಿ ಇತರರಿಗೆ ಮಾದರಿಯಾಗಿದ್ದಾರೆ.

ಮೂಲ್ಕಿಯ ಕಾರ್ನಾಡುವಿನಲ್ಲಿ ಕಾರ್ಯಾಚರಣೆ ನಡೆಸುವ ಮೈಮೂನಾ ಫೌಂಡೇಶನ್‍ನ ನಿರ್ದೇಶಕ ಆಪದ್ಬಾಂಧವ ಆಸೀಫ್, ಈ ಮಾದರಿ ಕೆಲಸ ಮಾಡಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಬ್ರಹ್ಮಸ್ತಾನ ಬಳಿಯ ನಿವಾಸಿ ವೇಣುಗೋಪಾಲ ರಾವ್(62) ಕಳೆದ ನಾಲ್ಕು ವರ್ಷಗಳ ಹಿಂದೆ ಮಾನಸಿಕವಾಗಿ ಪಡುಬಿದ್ರೆ ದೇವಸ್ಥಾನದ ಬಳಿಯಲ್ಲಿ ನಿರ್ಗತಿಕರಾಗಿದ್ದರು.

ಸ್ಥಳೀಯರು ಮೂಲ್ಕಿಯ ಕಾರ್ನಾಡುವಿನ ಆಪಾದ್ಬಾಂದವ ಆಸೀಫ್ ರವರಿಗೆ ತಿಳಿಸಿದ್ದು, ಕೂಡಲೇ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನದ ನಂತರ ಸ್ವಲ್ಪ ಮಟ್ಟಿಗೆ ಗುಣಮುಖರಾಗಿದ್ದು, ಬಳಿಕ ಮನೆಗೆ ಕರೆದುಕೊಂಡು ಹೋಗುವಂತೆ ವೇಣುಗೋಪಾಲರಾವ್ ಸಂಬಂಧಿಕರನ್ನು ವಿನಂತಿಸಿದಾಗ ಸಂಬಂಧಿಕರಿಂದ ಸೂಕ್ತ ಸ್ಪಂದನೆ ದೊರಕದೆ ಆಪದ್ಬಾಂಧವ ಆಸೀಫ್ ಅವರು ಮುಲ್ಕಿಯ ಕಾರ್ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ತಮ್ಮ ಅನಾಥಾಶ್ರಮದಲ್ಲಿ ಸಾಕಿ ಸಲಹುತ್ತಿದ್ದರು. ಇದೀಗ ವೇಣುಗೋಪಾಲ ರಾವ್ ಆರೋಗ್ಯ ಹದಗೆಟ್ಟು ಮಾನಸಿಕ ನೋವಿನಿಂದ ಬಳಲಿ ನಿಧನರಾಗಿದ್ದು, ಕೂಡಲೇ ಆಪದ್ಬಾಂಧವ ಆಸೀಫ್ ಅವರು ಹಿಂದೂ ಸಂಪ್ರದಾಯದಂತೆ ಮುಲ್ಕಿ ರುದ್ರಭೂಮಿಯಲ್ಲಿ ತಾವೇ ಅಂತ್ಯಸಂಸ್ಕಾರ ಮಾಡಿ ಮಾದರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *