ಬೈಕ್‌ ಮೇಲೆ ಒಂದೇ ಕಾಲಿನಲ್ಲಿ ನಿಂತು ಯುವಕರ ಹುಚ್ಚಾಟ

ಕೋಲಾರ: ಎಷ್ಟೇ ಅಪಘಾತಗಳು ಸಂಭವಿಸಿ ಪ್ರಾಣಾಹಾನಿಯಾದರೂ ಯುವಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಬೈಕ್ ವ್ಹೀಲಿಂಗ್ ಹುಚ್ಚಾಟ ನಿಂತಿಲ್ಲ. ಕೋಲಾರ ಜಿಲ್ಲೆಯಲ್ಲಿ ಸಹ ವ್ಹೀಲಿಂಗ್ ಗುಂಪುಗಳ ಕಿರಿಕಿರಿ ಮಿತಿಮೀರಿದೆ.

ಬೆಂಗಳೂರು – ತಿರುಪತಿ ರಾಷ್ಟ್ರೀಯ ಹೆದ್ದಾರಿಯ ನರಸಾಪುರ ಕೈಗಾರಿಕಾ ವಲಯದ ಬಳಿ ಯುವಕರ ಗುಂಪು ಈ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ದೂರು ಬಂದಿದೆ.

ಬೈಕ್ ಮೇಲೆ ಒಂದು ಕಾಲಿನಲ್ಲಿ‌ ನಿಂತು ಒಂದೇ ಚಕ್ರದಲ್ಲಿ ಚಲಿಸುವ ಬೈಕ್ ಸವಾರನ ವೀಲಿಂಗ್‌ ದೃಶ್ಯಾವಳಿ ಮೊಬೈಲಿನಲ್ಲಿ ಸೆರೆಯಾಗಿದೆ. ಇದರಿಂದ ಇತರೆ ಅಕ್ಕಪಕ್ಕದ ವಾಹನ ಚಾಲಕರು ಆತಂಕದಲ್ಲಿಯೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಜಿಲ್ಲೆಯ ಪೊಲೀಸರು ಈ ಬೈಕ್ ವ್ಹೀಲಿಂಗ್ ಪುಂಡರನ್ನು ಎಚ್ಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *