ಬೈಕಿನಲ್ಲಿ ಹೋಗುತ್ತಿದ್ದ ಯುವಕನ ಹತ್ಯೆಗೈದ ಕಿಡಿಗೇಡಿಗಳು

ಹಾಸನ: ಲಾಕ್‍ಡೌನ್ ನಡುವೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊರ್ವನನ್ನು ಕಿಡಿಗೇಡಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ವಲ್ಲಭಾಯಿ ರಸ್ತೆಯ ಹೂವಿನ ವ್ಯಾಪಾರಿ ಭರತ್ ಕೊಲೆಯಾದ ಯುವಕನಾಗಿದ್ದು, ಸಂತೆಪೇಟೆಯ 80 ಅಡಿ ರಸ್ತೆಯ ಮಧ್ಯೆ ಇಂತಹುದೊಂದು ಬರ್ಬರ ಕೊಲೆಯಾಗಿದೆ.

ಬಿಡಿ ಹೂಗಳನ್ನು ತೆಗೆದುಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ದಾಳಿ ನಡೆಸಿದ ದುಷ್ಕರ್ಮಿಗಳು, ಆತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

ಹೂವಿನ ವ್ಯಾಪಾರಿಯಾಗಿದ್ದ ಭರತ್ ರೌಡಿಶೀಟರ್ ಎರಡು ವಾರದ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಆದರೆ ಇವತ್ತು ಲಾಕ್‍ಡೌನ್ ನಡುವೆಯೂ ಆತನನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬಹಳ ಬರ್ಬರವಾಗಿ ಕೊಲೆಗೈದು ತಲೆಯನ್ನು ಎರಡು ಭಾಗ ಮಾಡಿದ್ದಾರೆ.

ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಈಗಾಗಲೇ ವಿಶೇಷ ತಂಡ ರಚನೆ ಮಾಡಿದ್ದು, ಕೆಲವು ಸುಳಿವುಗಳ ಆಧಾರದ ಮೇಲೆ ಅವರನ್ನು ಒಂದೆರಡು ದಿನಗಳಲ್ಲಿ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *