ಬೈಂದೂರು ದೋಣಿ ದುರಂತ- ನಾಲ್ವರ ಪೈಕಿ ಒಬ್ಬ ಮೀನುಗಾರನ ಮೃತದೇಹ ಪತ್ತೆ

ಉಡುಪಿ: ಬೈಂದೂರು ತಾಲೂಕಿನಲ್ಲಿ ನಡೆದ ದೋಣಿ ದುರಂತಕ್ಕೆ ಸಂಬಂಧಪಟ್ಟಂತೆ ಓರ್ವ ಮೀನುಗಾರರ ಮೃತದೇಹ ಪತ್ತೆಯಾಗಿದೆ. ದುರ್ಘಟನೆ ನಡೆದ ಕಿರಿಮಂಜೇಶ್ವರ ದಿಂದ ಕೊಂಚ ದೂರದಲ್ಲಿರುವ ನಾಗೂರು ಪ್ರದೇಶದಲ್ಲಿ ಮೃತದೇಹ ಬೀಚ್ ಬದಿಯಲ್ಲಿ ಕಾಣಿಸಿಕೊಂಡಿದೆ.

ಕಣ್ಮರೆಯಾದವರ ಪೈಕಿ 55 ವರ್ಷದ ನಾಗ ಕಾರ್ವಿ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದರು. ಕೋಸ್ಟ್ ಗಾರ್ಡ್ ಕರಾವಳಿ ಕಾವಲು ಪಡೆ, ಸ್ಥಳೀಯ ಮೀನುಗಾರರು ಪೊಲೀಸರು ಶೋಧ ನಡೆಸಿದ್ದರು. ಕ್ರೈನ್, ಬಲೆಗಳನ್ನು ಬಳಸಿ ಪತ್ತೆಗಾಗಿ ಹರಸಾಹಸ ಮಾಡಲಾಗಿತ್ತು. ಕತ್ತಲಾದ್ದರಿಂದ ಶೋಧಕಾರ್ಯವನ್ನು ನಿಲ್ಲಿಸಿದ್ದರು. ಇಂದು ಬೆಳಗ್ಗೆ ನಾಗರಾಜ ಖಾರ್ವಿ ಮೃತದೇಹ ಪತ್ತೆಯಾಗಿದ್ದು, ಮಿಕ್ಕುಳಿದ ಮೂವರಿಗಾಗಿ ಶೋಧ ಮುಂದುವರಿದಿದೆ.

ಅರಬ್ಬಿ ಸಮುದ್ರದಲ್ಲಿ ಅಲೆಗಳ ನಡುವೆ ದೋಣಿಯಲ್ಲಿ ಇಳಿದು ಹುಡುಕಾಟ ನಡೆಸುವುದು ಕಷ್ಟಸಾಧ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ. ಶೇಖರ್ ಖಾರ್ವಿ, ಲಕ್ಷ್ಮಣ್ ಖಾರ್ವಿ, ಮಂಜುನಾಥ ಖಾರ್ವಿ ಕಣ್ಮರೆಯಾಗಿದ್ದು ಹುಡುಕಾಟ ಮುಂದುವರಿದಿದೆ. ನಿತ್ಯಾನಂದ, ಅಣ್ಣಪ್ಪ, ಸತೀಶ್, ಮಹಾಬಲ, ಜನಾರ್ದನ್, ವೆಂಕಟರಮಣ್, ಚಂದ್ರಶೇಖರ್, ಹಾಗೂ ಚಂದ್ರ ಪಾರಾಗಿದ್ದು, ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments

Leave a Reply

Your email address will not be published. Required fields are marked *