ಬೇರೆಯವರಿಗಿಂತ ರಾಜಕಾರಣಿ ಮಕ್ಕಳು ಕೆಡಲು ಹೆಚ್ಚು ಅವಕಾಶ ಇದೆ: ವಿಶ್ವನಾಥ್

ಮಂಡ್ಯ: ಡ್ರಗ್ಸ್ ಜಾಲವನ್ನು ಅತ್ಯಗತ್ಯವಾಗಿ ಭೇದಿಸಲೇಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳು ಹಾಳಾಗಿ ಬಿಡುತ್ತವೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿದ್ದಾರೆ.

ನಗರದಲ್ಲಿ ಮಾತನಾಡಿದ ವಿಶ್ವನಾಥ್, ಡ್ರಗ್ಸ್ ಜಾಲವನ್ನು ಅತ್ಯಗತ್ಯವಾಗಿ ಭೇದಿಸಲೇಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳು ಹಾಳಾಗಿ ಬಿಡುತ್ತವೆ. ಈಗ ಯಾರನ್ನಾದರೂ ಸಾಯಿಸಿ ದೊಡ್ಡವನಾಗಬೇಕು ಎನ್ನೋ ಸ್ಥಿತಿ ಇದೆ. ಹೀಗಾಗಿ ಸರ್ಕಾರ ಈ ಜಾಲವನ್ನು ಭೇದಿಸಬೇಕು ಎಂದರು.

ಸಂಘ ಸಂಸ್ಥೆಗಳು, ತಂದೆ-ತಾಯಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಮ್ಮೆಲ್ಲರಿಗೂ ಹೆಚ್ಚಿನ ಜವಾಬ್ದಾರಿ ಇದೆ. ಒಂದು ಮಗುವಿಗೆ ಶಿಕ್ಷಣ, ಸಮಾಜದ ಸೌಲಭ್ಯವನ್ನು ಹೇಗೆ ಕೊಡುತ್ತಿಯೋ ಅದೇ ರೀತಿ ಮಗುವನ್ನು ಸಂರಕ್ಷಣೆ ಮಾಡುವುದು ಕೂಡ ಸಮಾಜದ ಎಲ್ಲರ ಹೊಣೆಯಾಗಿದೆ ಎಂದು ವಿಶ್ವನಾಥ್ ಹೇಳಿದರು.

ಎಲ್ಲ ಮಕ್ಕಳು ಒಂದೇ ರೀತಿ. ಆದರೆ ರಾಜಕಾರಣಿ ಮಕ್ಕಳು ಕೆಡಲು ಬೇರೆಯವರಿಗಿಂತ ಹೆಚ್ಚು ಅವಕಾಶ ಇರುತ್ತದೆ. ಯಾಕೆಂದರೆ ರಾಜಕಾರಣಿ ಮಕ್ಕಳು ಆರ್ಥಿಕವಾಗಿ ಚೆನ್ನಾಗಿ ಇರುತ್ತಾರೆ. ಜೊತೆಗೆ ವಿಶೇಷವಾದ ಸವಲತ್ತುಗಳು ಇರುತ್ತವೆ. ಹೀಗಾಗಿ ರಾಜಕಾರಣಿ ಮಕ್ಕಳು ಹಾಳಾಗಲು ಹೆಚ್ಚು ಅವಕಾಶವಿದೆ ಎಂದು ವಿಶ್ವನಾಥ್ ತಿಳಿಸಿದರು.

Comments

Leave a Reply

Your email address will not be published. Required fields are marked *