ಬೆಳಗಾವಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸ್ ವಶಕ್ಕೆ

ಬೆಳಗಾವಿ: ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಸುವರ್ಣ ಸೌಧದ ಬಳಿಕ ಗಾರ್ಡನ್ ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸಭೆ ಕರೆದಿದ್ದರು.

ನಗರದ ಮಿಲನ್ ಹೋಟೆಲ್ ಗೆ ಆಗಮಿಸಿದ ಕ್ಯಾಂಪ್ ಠಾಣೆಯ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಜೊತೆಯಲ್ಲಿದ್ದವರನ್ನ ಸಹ ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಕಾನೂನು ಬಾಹಿರವಾಗಿದೆ ಎಂದು ಕಾರ್ಮಿಕ ಇಲಾಖೆ ಹೇಳುತ್ತಿದೆ. ಆದರೆ ನಾವು ಹೇಳಿದ್ದು ಏಳನೆಯ ತಾರಿಖು ಹಾಗೂ ಚಳಿವಳಿ ಆರಂಭವಾಗಿದ್ದು ಎಳನೆ ತಾರಿಖೀನಂದು. ಆದರೆ ಆರನೇ ತಾರಿಖಿನಿಂದು ಪ್ರತಿಭಟನೆ ಆರಂಭ ಮಾಡಿದ್ದೀರಿ ಎಂದು ಕಾರ್ಮಿಕ ಇಲಾಖೆ ಹೇಳಿದೆ. ಚಳುವಳಿಯನ್ನು ದಮನ ಮಾಡುವ ಪ್ರಯತ್ನ ನಡೆದಿದೆ, ಇದಕ್ಕೆಲ್ಲಾ ಜಗ್ಗಲ್ಲ ಬಗ್ಗಲ್ಲಾ ಚಳುವಳಿ ಮುಂದುವರೆಯಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪಬ್ಲಿಕ್ ಟಿವಿ ಗೆ ಹೇಳಿದ್ದಾರೆ.

6 ನೇ ವೇತನ ಆಯೋಗ ಸೇರಿದಂತೆ ಹಲವಾರು ಬೇಡಿಕೆಗಳು ಸರ್ಕಾರದ ಮುಂದಿಟ್ಟಿದ್ದೇವೆ. ಸರ್ಕಾರ ಈ ಹಿಂದೆ ಲಿಖಿತ ಪತ್ರ ನೀಡಿದ್ದಾರೆ ಅದನ್ನೇ ಪಾಲಿಸಿ ಎಂದು ನಾವು ಚಳುವಳಿ ಮಾಡುತ್ತಿರುವುದು ಎಂದರು.

Comments

Leave a Reply

Your email address will not be published. Required fields are marked *