ಬೆಂಗಳೂರಿನಲ್ಲಿ ವಿಶಿಷ್ಟ ರೀತಿಯ ಮುಳುಬಾಗಿಲು ದೋಸಾ ಕಾರ್ನರ್ ಓಪನ್

ಬೆಂಗಳೂರು: ವಿಭಿನ್ನ ರುಚಿಯ ದೋಸೆಗಳನ್ನು ಸವಿಯೋದು ಅಂದರೆ ಆಹಾರ ಪ್ರಿಯರಿಗೆ ಎಲ್ಲಿಲ್ಲದ್ದ ಪ್ರೀತಿ. ಆದರೆ ಮುಳುಬಾಗಿಲು ದೋಸೆ ಅಂದರೆ ಬಾಯಲ್ಲಿ ನೀರು ಬರುವುದು ಪಕ್ಕಾ. ಈ ಕಾರಣಕ್ಕೆ ನರಗದಲ್ಲಿನ ಪೈ ವೈಸ್ ರಾಯ್‍ನಲ್ಲಿ ಇನ್ನು ಮುಂದೆ ರುಚಿಯಾದ ಮತ್ತು ಶುಚಿಯಾದ ಮುಳುಬಾಗಿಲು ದೋಸೆಯನ್ನು ಸವಿಯಬಹುದು.

ಜಯನಗರದ ಪೈ ವೈಸ್ ರಾಯ್‍ನಲ್ಲಿ ನೂತನವಾಗಿ ಮುಳುಬಾಗಿಲು ದೋಸಾ ಕಾರ್ನರ್ ನ್ನು ಆರಂಭ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಚಿಕ್ಕ ಪೇಟೆ ವಿಧಾನಸಭಾ ಕ್ಷೇತ್ರದ ಉದಯ್ ಗರುಡಾಚಾರ್ ಉದ್ಘಾಟಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಮುಳಬಾಗಿಲು ದೋಸೆ ತಿನ್ನಬೇಕು ಅಂದರೆ ಮುಳಬಾಗಿಲಿಗೆ ಹೋಗಬೇಕಾಗಿತ್ತು. ಆದರೆ ಈಗ ಪೈ ವೈಸ್ ರಾಯ್ ಹೋಟೆಲ್‍ನವರು ಬೆಂಗಳೂರು ಜನರಿಗೆ ಮುಳುಬಾಗಿಲು ದೋಸೆ ರುಚಿ ತೋರಿಸುತ್ತಿದ್ದಾರೆ. ಎಲ್ಲರೂ ಬನ್ನಿ ಸೇವನೆ ಮಾಡಿ ಎಂದು ಹೇಳಿದರು.

ಪೈ ವೈಸ್ ರಾಯ್ ಹೋಟೆಲ್ ಸುಜಾಯ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಮುಳಬಾಗಿಲು ದೋಸೆ ಕಾರ್ನರ್ ಮಾಡುತ್ತಿದ್ದೇವೆ. ದೋಸೆ ಜೊತೆಗೆ ವಿವಿಧ ರೀತಿಯ ಆಹಾರಗಳು ಕೂಡ ಲಭ್ಯವಿದೆ. ಬೆಂಗಳೂರಿನ ಜನರಿಗೆ ವಿಶಿಷ್ಟ ಖಾದ್ಯ ಆಹಾರಗಳನ್ನು ಪರಿಚಯಿಸುತ್ತೇವೆ ಬಂದು ಅದನ್ನು ಸವಿಯಬಹುದು. ಜಯನಗರದ ಮೂರನೇ ಹಂತದಲ್ಲಿ ಇದನ್ನು ಆರಂಭ ಮಾಡಿದ್ದೇವೆ. ಪ್ರತಿಯೊಬ್ಬರು ಭೇಟಿ ಕೊಟ್ಟು ವಿಶಿಷ್ಟ ಖಾದ್ಯ ಆಹಾರಗಳನ್ನು ಸವಿಯಿರಿ ಎಂದು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *