ಬೂತ್ ಮಾದರಿಯಲ್ಲಿ ವ್ಯಾಕ್ಸಿನ್ ವಿತರಣೆಗೆ ಪ್ಲಾನ್ – ಸಚಿವರು, ಶಾಸಕರಿಗೆ ಸಿಎಂ ವಾರ್ನಿಂಗ್

ಬೆಂಗಳೂರು: ಕೊರೊನಾ ಲಸಿಕೆಗೆ ದಿನಗಣನೆ ಶುರುವಾಗಿದೆ. ಲಸಿಕೆ ವಿತರಣೆ ವ್ಯವಸ್ಥೆ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅಲರ್ಟ್ ಆಗಿದ್ದಾರೆ. ಲಸಿಕೆ ಹಂಚಿಕೆ ಪ್ರಕ್ರಿಯೆ ಯಶಸ್ವಿಯಾಗಲು ಸಿಎಂ ಪಣತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಷ್ಟ ದಿಕ್ಪಾಲಕರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈ ತಿಂಗಳಾಂತ್ಯಕ್ಕೆ ಕೊವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಕೊರೊನಾ ಲಸಿಕೆ ಹಂಚಿಕೆ ವ್ಯವಸ್ಥೆ ಯಶಸ್ಸಿಗೆ ಸಿಎಂ ಕಸರತ್ತು ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಸಚಿವರು ಶಾಸಕರಿಗೆ ಸಿಎಂ ಅಲರ್ಟ್ ಮೆಸೇಜ್ ಪಾಸ್ ಮಾಡಿದ್ದಾರೆ. ಲಸಿಕೆ ವಿತರಣೆ, ನಿರ್ವಹಣೆ ಹೇಗಿರಬೇಕು, ಹೇಗಿರಬಾರದೆಂದು ಸಿಎಂ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಎಂಟು ವಲಯಗಳ ದಿಕ್ಪಾಲಕರಿಗೂ ಸಿಎಂ ಸೂಚನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೂ ಸಿಎಂ ನಿರ್ದೇಶನ ನೀಡಿದ್ದಾರೆ.

ಸಿಎಂ ‘ವ್ಯಾಕ್ಸಿನ್ ವಾರ್ನಿಂಗ್’ ಏನು..?
ಲಸಿಕೆ ವಿತರಣೆಯಲ್ಲಿ ರಾಜಕೀಯ ಸಲ್ಲದು. ಲಸಿಕೆ ಹಂಚಿಕೆ, ನಿರ್ವಹಣೆ ಪ್ರಕ್ರಿಯೆಯಲ್ಲಿ ಎಡವಟ್ಟಾಗಬಾರದು. ಹಂತ ಹಂತವಾಗಿ ನಿಗದಿಪಡಿಸಿದ ವರ್ಗಗಳಿಗೆ ಲಸಿಕೆ ವಿತರಣೆ ನಡೆಯಬೇಕು. ಡಿಸಿಗಳು, ಡಿಎಚ್‍ಒಗಳ ಜೊತೆ ಸಮನ್ವಯತೆ ಕಾಪಾಡಿಕೊಂಡು ವಿತರಿಸಿ ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಗಮನ ಕೊಡಬೇಕು. ಬೆಂಗಳೂರು ನಗರದ 1.65 ಲಕ್ಷ ಹೆಲ್ತ್ ವರ್ಕರ್ಸ್‍ಗೆ ಮೊದಲ ಆದ್ಯತೆ ನೀಡಿ. ಲಸಿಕೆ ಕೇಂದ್ರ, ಶೇಖರಣೆ ಕೇಂದ್ರಗಳ ಮೇಲೆ ತೀವ್ರ ನಿಗಾ ಇರಿಸಿ. ಆರೋಗ್ಯಾಧಿಕಾರಿಗಳ ಜತೆ ಕಿರಿಕ್ ಬೇಡ. ವ್ಯಾಕ್ಸಿನೇಷನ್ ಪ್ರಕ್ರಿಯೆಗೂ ಮುನ್ನ ಕ್ಷೇತ್ರವಾರು ಫಲಾನುಭವಿಗಳ ಲಿಸ್ಟ್ ರೆಡಿ ಇರಲಿ. ವ್ಯಾಕ್ಸಿನೇಷನ್ ಸಿದ್ಧತೆಯಲ್ಲಿ ಏನೇ ಸಮಸ್ಯೆ, ತೊಡಕು ಎದುರಾದ್ರೂ ಕೂಡಲೇ ಗಮನಕ್ಕೆ ತನ್ನಿ. ವ್ಯಾಕ್ಸಿನೇಷನ್ ಪ್ರಕ್ರಿಯೆಗೂ ಮುನ್ನ ಕ್ಷೇತ್ರವಾರು ಫಲಾನುಭವಿಗಳ ಲಿಸ್ಟ್ ರೆಡಿ ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *