ಬುರೇವಿ ಚಂಡಮಾರುತ ಎಫೆಕ್ಟ್- ನಾಳೆ, ನಾಡಿದ್ದು ಬೆಂಗ್ಳೂರಲ್ಲಿ ಮಳೆ

– ಡಿ. 6 ರಂದು ರಾಜ್ಯದ ಹಲವೆಡೆ ಬೀಳಲಿದೆ ಮಳೆ

ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ಬುರೇವಿ ಅಬ್ಬರದಿಂದ ಇಂದಿನಿಂದ ಡಿ.5 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬುರೇವಿ ಚಂಡಮಾರುತ ಎದ್ದಿದೆ. ಪ್ರತಿ ಗಂಟೆಗೆ 70 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸ್ತಿದೆ. ಡಿಸೆಂಬರ್ 3ರ ರಾತ್ರಿ ಅಥವಾ ಡಿಸೆಂಬರ್ 4ರ ಬೆಳಗ್ಗೆ ತಮಿಳುನಾಡು ಮತ್ತು ಕನ್ಯಾಕುಮಾರಿಗೆ ಸೈಕ್ಲೋನ್, ಎಫೆಕ್ಟ್ ಆಗಲಿದೆ. ಇದರ ಪರಿಣಾಮ ಇಂದಿನಿಂದ ಡಿ.5 ರವರೆಗೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು, ನಾಳೆ ಮತ್ತು ನಾಡಿದ್ದು ಮಳೆಯಾಗಲಿದೆ. ಮೂರು ದಿನವೂ ಜಿಟಿ ಜಿಟಿ ಹಾಗೂ ತುಂತುರು ಮಳೆಯಾಗಲಿದೆ. ಡಿ.6 ಮತ್ತು 7ರಂದು ರಾಜ್ಯದ ಹಲವೆಡೆ ಮಳೆಯಾಗಲಿದೆ. ಕರಾವಳಿ ಪ್ರದೇಶದಲ್ಲಿ ಇಂದಿನಿಂದ 6ರವರೆಗೆ ಮಳೆಯಾಗಲಿದೆ.

Comments

Leave a Reply

Your email address will not be published. Required fields are marked *