ಬಿಸಿಲಿನ ತಾಪಕ್ಕೆ ಹೊತ್ತಿ ಉರಿದ ಬೈಕ್

ಯಾದಗಿರಿ: ಬಿಸಿಲಿನ ತಾಪಕ್ಕೆ ಬೈಕ್ ನಿಂತಲ್ಲೆ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದ ಹೊರ ವಲಯದ ಕ್ಯಾನಲ್ ಬಳಿ ನಡೆದಿದೆ.

ಬಿಸಿಲಿನಲ್ಲಿ ನಿಲ್ಲಿಸಿದ್ದ ವೇಳೆ ಏಕಾಏಕಿ ಬೈಕ್‍ಗೆ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೈಕ್ ಸುಟ್ಟು ಕರಕಲಾಗಿದೆ. ಅನ್ವರ್ ಗ್ರಾಮದ ಬೈಕ್ ಇದಾಗಿದ್ದು, ಅನ್ವರ್ ಗ್ರಾಮದಿಂದ ಕ್ಯಾತನಾಳಗೆ ಹೋಗುವಾಗ ಅವಘಡ ನಡೆದಿದೆ. ಬೈಕ್ ಮಾಲೀಕರ ಮಾಹಿತಿ ಪತ್ತೆಯಾಗಿಲ್ಲ.  ಉತ್ತರ ಕರ್ನಾಟಕ ಭಾಗದಲ್ಲಿ ವಿಪರೀತ ಬಿಸಿಲಿದ್ದು, ಜನ ಕಂಗಾಲಾಗಿದ್ದಾರೆ. ಬೆಂಕಿ ಅವಘಡಗಳು ಹೆಚ್ಚು ನಡೆಯುತ್ತಿವೆ.

ಇದೀಗ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ್ದು, ಬಿಸಿಲಿನಿಂದ ಜನ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಹೆಚ್ಚು ಅನಾಹುತಗಳು ಸಹ ಸಂಭವಿಸುತ್ತಿವೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಬೈಕ್ ಹೊತ್ತಿ ಉರಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *