ಬಿಜೆಪಿ ನಾಯಕನಿಗೆ ಗುಂಡಿಟ್ಟು, ಮಗನಿಗೆ ಚಾಕುವಿನಿಂದ ಇರಿದ್ರು

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ನಾಯಕನ ಕಗ್ಗೊಲೆಯಾಗಿದೆ. ಬೆಳಗ್ಗೆ ಮಸೀದಿಗೆ ಹೊರಟಿದ್ದ ನಾಯಕನನ್ನ ಅಡ್ಡಗಡ್ಡಿದ ದುಷ್ಕರ್ಮಿಗಳು ಶೂಟ್ ಮಾಡಿ ಕೊಲೆಗೈದಿದ್ದಾರೆ.

ಜುಲ್ಫಿಕಾರ್ ಕೊಲೆಯಾದ ಬಿಜೆಪಿ ನಾಯಕ ಮತ್ತು ಆರ್ ಟಿಐ ಕಾರ್ಯಕರ್ತ. ದೆಹಲಿಯ ಸುಂದರ ನಗರದಲ್ಲಿ ಕೊಲೆ ನಡೆದಿದೆ. ಜೊತೆಯಲ್ಲಿದ್ದ ಜುಲ್ಫೀಕಾರ್ ಪುತ್ರ ಕುರೈಶಿಗೆ ಚಾಕುವಿನಿಂದ ಇರಿದಿದ್ದಾರೆ.

ಕುರೈಶಿಯನ್ನು ಸ್ವಾಮಿ ದಯಾನಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜುಲ್ಫಿಕಾರ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಕುಟುಂಬಸ್ಥರು ಮತ್ತು ಸ್ಥಳೀಯರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.

 

Comments

Leave a Reply

Your email address will not be published. Required fields are marked *