ಬಿಗ್‍ಬಾಸ್ ಮನೆಗೆ ಬಂತು ನಾಯಿಮರಿ!

ಇಷ್ಟು ದಿನ ಸ್ಪರ್ಧಿಗಳಷ್ಟೇ ಇದ್ದ ಬಿಗ್‍ಬಾಸ್ ಮನೆಗೆ ನಿನ್ನೆ ನಾಯಿ ಮರಿಯೊಂದು ಎಂಟ್ರಿ ನೀಡಿತ್ತು. ಬಿಗ್‍ಬಾಸ್ ಕಾರ್ಯಕ್ರಮ ಶುರುವಾದಾಗಿನಿಂದಲೂ ವಿವಿಧ  ಟಾಸ್ಕ್‌ಗಳನ್ನು ನೀಡಿದ್ದ ಬಿಗ್‍ಬಾಸ್, ನಿನ್ನೆ ಮನೆಯ ಸದಸ್ಯರಿಗೆ ವಿಭಿನ್ನವಾದ ಟಾಸ್ಕ್ ನೀಡಿದ್ದಾರೆ.

ಯೆಸ್, ನಿನ್ನೆ ಮನೆಯ ಸದಸ್ಯರಿಗೆ ಬಿಗ್‍ಬಾಸ್ ಕೃತಕ ನಾಯಿಮರಿಯೊಂದನ್ನು ಕಳುಹಿಸಿದ್ದರು. ಆ ನಾಯಿಯನ್ನು ಮನೆಯ ಸದಸ್ಯರು ಪ್ರೀತಿಯಿಂದ ನೋಡಿಕೊಳ್ಳಬೇಕಾಗಿತ್ತು. ಆ ನಾಯಿಮರಿಗೆ ಕೋಪಬಂದಾಗ ಬೋಗಳುತ್ತದೆ. ಬೇಸರವಾದಾಗ ಅಳುತ್ತದೆ. ಹಾಗಾಗಿ ಅದಕ್ಕೆ ಕೋಪ ಹಾಗೂ ಅಳು ಬರದಂತೆ ನೋಡಿಕೊಳ್ಳಬೇಕು ಹಾಗೂ ಸದಸ್ಯರು ಬಜರ್ ಆದ ನಂತರ ಒಬ್ಬೊಬ್ಬರಾಗಿ ನಾಯಿಮರಿಯನ್ನು ವರ್ಗಾಯಿಸಿ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.

ಅದರಂತೆ ಮೊದಲಿಗೆ ದಿವ್ಯಾ ಸುರೇಶ್ ಎತ್ತಿಕೊಂಡು ಕುಣಿದಾಡುತ್ತಾ ನೋಡಿಕೊಳ್ಳುತ್ತಾರೆ. ಜೊತೆಗೆ ನಾಯಿ ಮರಿಯೊಂದಿಗೆ ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಾರೆ. ಬಳಿಕ ದಿವ್ಯಾ ಸುರೇಶ್, ಶುಭಾಗೆ ನಾಯಿ ಮರಿಯನ್ನು ವರ್ಗಾಯಿಸುತ್ತಾರೆ. ಆಗ ಶುಭ ನಾಯಿಮರಿಯೊಂದಿಗೆ ಮಾತನಾಡುತ್ತಾ ಆಟ ಆಡಿಸುತ್ತಾರೆ. ನಂತರ ಕಿಚನ್ ಏರಿಯಾಗೆ ಹೋಗಿ ನಾಯಿಮರಿ ವೈಷ್ಣವಿ ಅಕ್ಕ ಚಿಕನ್ ಕೊಡಿ ಎಂದು ನಾಯಿ ತರ ಮುದ್ದು-ಮುದ್ದಾಗಿ ಮಾತನಾಡುತ್ತಾರೆ. ಆಗ ಎಲ್ಲರೂ… ನಾಯಿಮರಿಗೆ ಚಿಕನ್ ಬೇಕಾ ಅಥವಾ ನಿನಗೆ ಬೇಕಾ ಎಂದು ದಿವ್ಯಾ ಉರುಡುಗ, ವೈಷ್ಣವಿ ಶುಭಾರನ್ನು ಕೇಳುತ್ತಾರೆ.

ನಂತರ ಶುಭಾಯಿಂದ ನಾಯಿಮರಿಯನ್ನು ವೈಷ್ಣವಿ ಸ್ವೀಕರಿಸಿ ಆಟ ಆಡಿಸುತ್ತಿರುತ್ತಾರೆ. ಈ ವೇಳೆ ರಘು ಕೂಡ ನಾಯಿ ಜೊತೆ ಆಟವಾಡುತ್ತಾರೆ. ಆಗ ಮಂಜು ಕೂಡ ಆಟವಾಡಲು ಹೋದಾಗ ನಾಯಿಮರಿ ಬೋಗಳುತ್ತದೆ. ಈ ವೇಳೆ ಮಂಜು, ಥೂ ನಿನ್ನ ಜನ್ಮಕ್ಕೆ ಬೆಂಕಿ ಇಕ್ಕ, ಇಷ್ಟು ಕಷ್ಟಪಟ್ಟು ಆಟ ಆಡಿಸಲು ಬಂದರೆ ಬೋಗಳುತ್ತಿಯಾ? ಎಂದು ಬೈಯ್ಯುತ್ತಾರೆ. ಇದನ್ನು ಕಂಡು ಮನೆಯ ಸದಸ್ಯರೆಲ್ಲ ಎರ್ರಾಬಿರ್ರಿ ನಗ್ತಾರೆ.

Comments

Leave a Reply

Your email address will not be published. Required fields are marked *