ಬಿಎಸ್‍ವೈ ಅನ್ನ ಹಾಕಿದ ದೇವರು – ಸಿದ್ದರಾಮಯ್ಯಗೆ ಕಾಟ ಕೊಟ್ಟ ಕುಡುಕ

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿ ಯುವ ಕಾಂಗ್ರೆಸ್ಸಿನ ರೇಷನ್ ಕಿಟ್ ವಿತರೇ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕುಡುಕನೊಬ್ಬ ವಿಪಕ್ಷ ಸಿದ್ದರಾಮಯ್ಯಗೆ ಕಿರಿ ಕಿರಿ ಉಂಟು ಮಾಡಿದ್ದಾನೆ.

ಭಾಷಣ ಮಾಡುವಾಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಮಧ್ಯದಲ್ಲಿ ವ್ಯಕ್ತಿಯೊಬ್ಬ ‘ಹೌದು ಹುಲಿಯಾ’ ಎಂದು ಕೂಗಿದ. ಹೌದು ಹುಲಿಯಾ.. ಬಳಿಕ ಸಿದ್ದರಾಮಯ್ಯಗೆ ಕುಡುಕನ ಕಾಟ ಎದುರಾಯ್ತು.

ಯಡಿಯೂರಪ್ಪಗೆ ಸಿದ್ದರಾಮಯ್ಯ ಬೈದಿದ್ದಕ್ಕೆ ರೊಚ್ಚಿಗೆದ್ದ ಕುಡುಕ, ಯಡಿಯೂರಪ್ಪ ಅವರನ್ನ ಬೈಯದಂತೆ ಕೂಗತೊಡಗಿದ. ಹೇ ಯಾರೋ ಅದು ಕುಡಿದಿದ್ದಾನೆ ಆಚೆ ಕಳಿಸಿ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಹುಟ್ಟುಹಬ್ಬ- ವಿಶೇಷಚೇತನರ ವಾಹನಗಳಿಗೆ ಪುಲ್ ಟ್ಯಾಂಕ್ ಪೆಟ್ರೋಲ್ ಫ್ರೀ

ಬೈಯಬೇಡಿ ಯಡಿಯೂರಪ್ಪ ಅನ್ನ ಹಾಕಿದ ದೇವರು ಅಂತಾನೆ ಅಲ್ಲಿಂದ ಹೊರಟ ಕುಡುಕ ಕಾಂಗ್ರೆಸ್ ಕಾರ್ಯಕರ್ತರು ಕುಡುಕನನ್ನ ಕಾರ್ಯಕ್ರಮದಿಂದ ಆಚೆ ಕಳಿಸಿದರು. ಸರ್ಕಾರ ಏನು ಮಾಡದಿದ್ರೂ, ಕುಡಿಸೋದು ಮಾತ್ರ ಗೊತ್ತು. ಈ ಸರ್ಕಾರಕ್ಕೆ ಎಂದು ಸಿದ್ದರಾಮಯ್ಯ ಮತ್ತೆ ಅಸಮಧಾನ ಹೊರ ಹಾಕಿದರು.

ನಡೆದುಕೊಂಡು ಹೋಗುವಾಗ ಸಿದ್ದರಾಮಯ್ಯನು ಅನ್ನಹಾಕಿದ ದೇವರು ಎಂದು ಕುಡುಕ ಗೊಣಗಿಕೊಂಡು ಹೋದ ಪ್ರಸಂಗ ನಡೆಯಿತು.

Comments

Leave a Reply

Your email address will not be published. Required fields are marked *