ಬಿಇಎಲ್ ಕಾರ್ಮಿಕರಿಂದ ಕನ್ನಡ ರಾಜ್ಯೋತ್ಸವ

ಬೆಂಗಳೂರು: ನಾಡಿನೆಲ್ಲೆಡೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಅದೇ ರೀತಿ ನಗರದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಬಿಇಎಲ್ ಕಾರ್ಮಿಕ ಹಿತರಕ್ಷಕ ಸಮಿತಿಯಿಂದ ಬಿಇಎಲ್ ನ ಕಲಾಕ್ಷೇತ್ರದಲ್ಲಿ ಕುವೆಂಪು ಮೂರ್ತಿಗೆ ಅಧಿಕಾರಿಗಳ ವರ್ಗದಿಂದ ಮಾಲಾರ್ಪಣೆ ಮಾಡಲಾಯಿತು. ನಂತರ ಹಳದಿ ಹಾಗೂ ಕೆಂಪು ಶಾಲು ಧರಿಸಿ, ಕನ್ನಡ ಧ್ವಜ ಹಿಡಿದು ಕಾಲ್ನಡಿಗೆ ಜಾಥಾ ನಡೆಸಲಾಯಿತು. ಬಿಇಎಲ್ ಮಿಲ್ ಕಾಂನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾ ರಾವ್, ಉಪ ವ್ಯವಸ್ಥಾಪಕ ಗುರುರಾಜ್ ಎಂ. ಧ್ವಜಾರೋಹಣ ನೆರೆವೇರಿಸಿದರು.

ಬಿಇಎಲ್ ಕರ್ನಾಟಕ ಕಾರ್ಮಿಕ ಹಿತರಕ್ಷಕ ಸಮಿತಿಯ ಅಧ್ಯಕ್ಷ ಬಾಬುಲಾಲ್, ಸಂಘದ ಕಾರ್ಯದರ್ಶಿ ಎಲ್.ಕೆ.ಶಿವರಾಜ್, ಸಿಐಟಿಯುನ ನವೀನ್ ಕುಮಾರ್, ಯೂನಿಟಿ ಪೋರಂನ ಪಳಿನಿ, ಬಿಇಎಲ್ ಅಧಿಕಾರಿಗಳ ಒಕ್ಕೂಟದ ಸಂಜೀತ್ ಕುಮಾರ್, ಲಲಿತಕಲಾ ಸಂಘದ ಡಿ.ಸಂತೋಷಕುಮಾರ್, ಕನ್ನಡ ಸಾಹಿತ್ಯ ಒಕ್ಕೂಟದ ವರದರಾಜು ಸೇರಿದಂತೆ ಬಿಇಎಲ್ ನ ಹಲವು ಸಂಘಟನೆಗಳ ಅಧಿಕಾರಿಗಳು, ಮುಖಂಡರುಗಳು ಭಾಗವಹಿಸಿದ್ದರು. ಸಮಿತಿಯು ಕರ್ನಾಟಕ ರಾಜ್ಯೋತ್ಸವವನ್ನು 41 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.

Comments

Leave a Reply

Your email address will not be published. Required fields are marked *