ಬಾಡಿಗೆ ನೀಡದ್ದಕ್ಕೆ ವಿಧವೆಯನ್ನ ಮರಕ್ಕೆ ಕಟ್ಟಿದ ಮಾಲೀಕ

– ಮನೆಯ ವಸ್ತುಗಳನ್ನ ಹೊರಗೆ ಎಸೆದ
– ಲಾಕ್‍ಡೌನ್‍ನಲ್ಲಿ ಕೆಲಸ ಕಳೆದುಕೊಂಡಿದ್ದ ಮಹಿಳೆ

ಲಕ್ನೋ: ಮನೆಯ ಬಾಡಿಗೆ ನೀಡದಕ್ಕೆ ಮಾಲೀಕನೋರ್ವ ಮಹಿಳೆ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮರೀಪುರ ಜಿಲ್ಲೆಯ ತಲಾಬ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶೋಭಾ ದೇವಿ ಹಲ್ಲೆಗೊಳಗಾದ ಮಹಿಳೆ. ತಲಾಬ್ ಇಲಾಖೆಯಲ್ಲಿರುವ ಭಗೀರಥ್ ಪ್ರಜಾಪತಿ ಎಂಬಾತನ ಬಾಡಿಗೆ ಮನೆಯಲ್ಲಿ ಶೋಭಾ ವಾಸವಾಗಿದ್ದರು. ಶೋಭಾ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಶೋಭಾ ಕೆಲ ತಿಂಗಳ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು.

ಮಾನವೀಯತೆ ಮರೆತ ಭಗೀರಥ್ ಕೆಲ ಮಹಿಳೆಯರೊಂದಿಗೆ ಶೋಭಾ ಮನೆಗೆ ಆಗಮಿಸಿದ್ದಾನೆ. ಮಹಿಳೆಯರ ಸಹಾಯದಿಂದ ಶೋಭಾ ಅವರನ್ನ ಮರಕ್ಕೆ ಕಟ್ಟಿ ಹಾಕಿ, ಮನೆಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿ ಬೀಗ ಹಾಕಿ ಬಾಡಿಗೆ ನೀಡುವಂತೆ ಕಿರುಕುಳ ನೀಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನ ರಕ್ಷಿಸಿ, ಭಗೀರಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *