ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ: ಲಿಂಬಾವಳಿ

ಚಾಮರಾಜನಗರ: ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಗಡಿ ಜಿಲ್ಲೆಯ ಬಂಡೀಪುರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿದೆ, ಈ ಹಿನ್ನಲೆಯಲ್ಲಿ ಕಾಡಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬೇಸಿಗೆ ಇರುವುದರಿಂದ ಪ್ರಾಣಿಗಳ ಸಮಸ್ಯೆ ಕೂಡ ಆಲಿಸಲಾಗಿದೆ. ಸೋಲಾರ್ ಪಂಪ್ ಗಳ ಮೂಲಕ ಕೆಲವೆಡೆ ನೀರು ತುಂಬಿಸಲಾಗುತ್ತಿದೆ. ಮುಂದಿನ ಬೇಸಿಗೆ ವೇಳೆಗೆ ಪ್ರಾಣಿಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸುವಂತೆ ತಿಳಿಸಿದರು.

ಇದೇ ವೇಳೆ ಹುಲಿಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಟ್ಟಿಗೆ ಬಂಡೀಪುರ ಫಾರೆಸ್ಟ್ ರೌಂಡ್ ಹಾಕಿದ್ದರು. ಈ ವೇಳೆ ಎರಡು ಕಡೆ ಹುಲಿ ಪ್ರತ್ಯಕ್ಷವಾಗಿವೆ. ತೀರಾ ಅಪರೂಪಕ್ಕೆ ದರ್ಶನ ಕೊಡುವ ಹುಲಿಗಳು ಸಚಿವರಿಗೆ ಎರಡು ಕಡೆ ದರ್ಶನ ಕೊಟ್ಟಿರೋದು ವಿಶೇಷ. ಬಂಡೀಪುರದ ಕಡುಬನಕಟ್ಟೆ, ಗಾರೆಪಾಲದ ಬಳಿ ಹುಲಿ ದರ್ಶನವಾಗಿದೆ. ಕಡುಬನಕಟ್ಟೆ ಬಳಿ ನೀರಿನಲ್ಲಿ ಕುಳಿತಿದ್ದ ಹುಲಿ ದರ್ಶನವಾಗಿದೆ. ಇದರ ಜೊತೆಗೆ ಆನೆಗಳ ಹಿಂಡಿನ ದರ್ಶನ ಸಹ ಆಗಿದೆ.

Comments

Leave a Reply

Your email address will not be published. Required fields are marked *