ಬಂಜಾರ ಸಮುದಾಯದ ಜಗದ್ಗುರು ಶ್ರೀ ಶ್ರೀ ಶ್ರೀ ರಾಮರಾವ್ ಮಹಾರಾಜ್ ವಿಧಿವಶ

ಮುಂಬೈ: ಬಂಜಾರ ಸಮುದಾಯದ ವಿಶ್ವದ ಏಕೈಕ ಹಾಗೂ ಪ್ರಥಮ ಜಗದ್ಗುರು ಶ್ರೀ ಶ್ರೀ ಶ್ರೀ ರಾಮರಾವ್ ಮಹಾರಾಜ್(90) ತಡರಾತ್ರಿ ಮಹಾರಾಷ್ಟ್ರದಲ್ಲಿ ವಿಧಿವಶರಾಗಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಪೌರಾಗಢದ ಪೀಠಧಿಪತಿಗಳಾಗಿದ್ದ ಶ್ರೀರಾಮರಾವ್ ಮಹಾರಾಜ್ ಬಂಜಾರರ ಕುಲಗುರು ಸಂತ ಸೇವಾಲಾಲರ ಕುಲದವರಾಗಿದ್ದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಡ ರಾತ್ರಿ ಮೃತಪಟ್ಟಿದ್ದಾರೆ.

ಜಗದ್ಗುರುಗಳ ನಿಧನಕ್ಕೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ, ಗುಲ್ಬರ್ಗ ಸಂಸದ ಡಾ.‌ಉಮೇಶ ಜಾಧವ ಸೇರಿದಂತೆ ಲಂಬಾಣಿ ಸಮುದಾಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *