ಪೈಪಿನಲ್ಲಿ ಹೆಬ್ಬಾವು ಮರಿ ಹಿಡಿದ ಪೇಜಾವರ ಶ್ರೀ

– ಉಡುಪಿಯ ನೀಲಾವರ ಗೋಶಾಲೆಯಲ್ಲಿ ರಕ್ಷಣೆ

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪೇಜಾವರ ಮಠದಲ್ಲಿ ಅಡ್ಡಾಡುತ್ತಿದ್ದ ಹೆಬ್ಬಾವಿನ ಮರಿಯನ್ನು ರಕ್ಷಣೆ ಮಾಡಲಾಗಿದೆ. ಹಾವನ್ನು ರಕ್ಷಣೆ ಮಾಡಿದ್ದು ಮತ್ಯಾರೂ ಅಲ್ಲ, ಪೇಜಾವರ ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು.

ಶ್ರೀಗಳು ಹಾವಿನ ಮರಿಯನ್ನು ಹಿಡಿದು ಸಣ್ಣದೊಂದು ಪೈಪ್ ನಲ್ಲಿ ತುಂಬಿದ್ದಾರೆ. ನಂತರ ಅದನ್ನು ಮಠದ ತೋಟಕ್ಕೆ ತಂದು ಬಿಟ್ಟಿದ್ದಾರೆ. ಮಾಮೂಲಿಯಾಗಿ ಹೆಬ್ಬಾವು ಹತ್ತಾರು ಸಂಖ್ಯೆಯಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತದೆ. ಹರಿದಾಡಲು ಶುರು ಮಾಡಿದ ಮೇಲೆ ಮರಿಗಳು ಸ್ವತಂತ್ರ ಆಗುತ್ತವೆ. ಹೀಗೆ ಗುಂಪಿನಿಂದ ಬೇರ್ಪಟ್ಟ ಹೆಬ್ಬಾವಿನ ಮರಿ ಮಠದೊಳಗೆ ಬಂದಿತ್ತು.

ದನ ಕರುಗಳಿರುವ ಹಟ್ಟಿಯತ್ತ ಹೋಗಿತ್ತು. ಹಸುಗಳ ಕಾಲಿನಡಿ ಹಾವು ಸಿಲುಕಬಾರದೆಂದು ಸ್ವಾಮೀಜಿ ಹೆಬ್ಬಾವು ಮರಿ ರಕ್ಷಣೆ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತಮಾಡಿದ ಅವರು, ನೀಲಾವರ ಗೋಶಾಲೆ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಕಾಡುಪ್ರಾಣಿಗಳ ಓಡಾಟ ಸಾಮಾನ್ಯ. ಹೆಬ್ಬಾವಿನ ಮರಿ ಆಗಿರುವುದರಿಂದ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ಕೃಷಿ ಚಟುವಟಿಕೆ ಮಾಡುವಾಗ ಹಾವು ಕಾಣ ಸಿಗುತ್ತಿರುತ್ತದೆ ಎಂದರು.

Comments

Leave a Reply

Your email address will not be published. Required fields are marked *