ಪುಂಡಾನೆ ಸೆರೆ – ಕ್ರೇನ್ ಮೂಲಕ ಲಾರಿಗೆ ಹತ್ತಿದ ಗಜರಾಜ

ಹಾಸನ: ಸಕಲೇಶಪುರ ಸುತ್ತಮುತ್ತ ಹಾವಳಿ ಮಾಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮತ್ತೂರು ಮೀಸಲು ಅರಣ್ಯದಲ್ಲಿ ಪುಂಡಾನೆ ಸೆರೆಸಿಕ್ಕಿದೆ.

ಕಳೆದ ಒಂದು ವಾರದಿಂದ ಸಕಲೇಶಪುರ ಭಾಗದಲ್ಲಿ ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದು ಮತ್ತು ಒಂದು ಪುಂಡಾನೆ ಸೆರೆಹಿಡಿಯುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಎರಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಒಂದು ಪುಂಡಾನೆ ಸೆರೆಹಿಡಿಯಲಾಗಿದೆ. ಸೆರೆಹಿಡಿದ ಪುಂಡಾನೆಯನ್ನು ಜಿಲ್ಲೆಯಿಂದ ಹೊರಭಾಗದ ಪೂರಕ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು.

ಪುಂಡಾನೆಯ ಚಲನವಲನ ಗಮನಿಸಲು ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ. ಪುಂಡಾನೆಯನ್ನು ಲಾರಿಗೆ ಹತ್ತಿಸುವಾಗ ಅದಕ್ಕೆ ಯಾವುದೇ ಗಾಯ ಆಗದಂತೆ ಈ ಬಾರಿ ಕ್ರೇನ್ ಬಳಸಿ ಆನೆಯನ್ನು ಲಾರಿಯಲ್ಲಿ ಕರೆತರಲಾಗಿದೆ. ಆನೆ ಸೆರೆಹಿಡಿದ ನಂತರ ಅದನ್ನು ಕಾಡಿನಿಂದ ಕರೆತರುವಾಗ ಪ್ರತಿರೋಧ ತೋರಿದ್ದು, ಅಂತಿಮವಾಗಿ ಆನೆಯನ್ನು ಲಾರಿಗೆ ತುಂಬಲು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *