ಪಾಕ್‍ಗೆ ಶಸ್ತ್ರಾಸ್ತ್ರ ನೀಡಲ್ಲ ಎಂದ ರಷ್ಯಾ – ಭಾರತಕ್ಕೆ ದೊಡ್ಡ ಗೆಲುವು

– ಭಾರತದ ಮನವಿಗೆ ಸ್ಪಂದಿಸಿ ರಷ್ಯಾ ನಿರ್ಧಾರ

ಮಾಸ್ಕೋ: ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭಾರತಕ್ಕೆ ಮತ್ತೊಂದು ಬಹುದೊಡ್ಡ ಗೆಲುವು ಲಭಿಸಿದ್ದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಬಾರದು ಎಂಬ ಭಾರತ ಮನವಿಯನ್ನು ರಷ್ಯಾ ಪುರಸ್ಕರಿಸಿದೆ. ಪಾಕಿಸ್ತಾನಕ್ಕೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪೂರೈಸುವುದಿಲ್ಲ ಎಂದು ಹೇಳಿದೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಜೆ ಮಾಸ್ಕೋದಲ್ಲಿ ಜನರಲ್ ಸರ್ಜರಿ ಶೋಯಿಗು ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಪೂರೈಸುವುದಿಲ್ಲ. ಹಿಂದಿನ ನೀತಿಯನ್ನೇ ಮುಂದುವರಿಸುತ್ತೇವೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.

ಮಾತುಕತೆ ವೇಳೆ ರಷ್ಯಾ ತನ್ನ ನೀತಿಯನ್ನು ಪುನರುಚ್ಛರಿಸಿದ್ದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುವುದಿಲ್ಲ. ಭಾರತದ ಮನವಿಯನ್ನು ಪುರಸ್ಕರಿಸುತ್ತೇವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತ ರಕ್ಷಣಾ ಸಚಿವಾಲಯ ಸಹ ಈ ಕುರಿತು ಸ್ಪಷ್ಟಪಡಿಸಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಜನರಲ್ ಶೋಯಿಗು ನಡುವೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಭೆ ನಡೆದಿದ್ದು, ಮಾಸ್ಕೋದ ರಷ್ಯನ್ ರಕ್ಷಣಾ ಸಚಿವಾಲಯದಲ್ಲಿ ನಡೆದಿತ್ತು ಎಂದು ಈ ಹಿಂದೆ ತಿಳಿಸಿತ್ತು.

ಸಭೆಯಲ್ಲಿ ಉಭಯ ದೇಶಗಳ ನಡುವೆ ಸಹಕಾರ ಹಾಗೂ ಸಂಬಂಧದ ಕುರಿತು ನಡೆದಿದ್ದು, ಎರಡು ದೇಶಗಳ ರಕ್ಷಣಾ ವಿಭಾಗಕ್ಕೆ ಶಕ್ತಿ ತುಂಬುವುದು ಹಾಗೂ ಎರಡೂ ದೇಶಗಳ ನಡುವೆ ಸಹಕಾರ, ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಿದ್ದಾರೆ.

ಸಭೆ ಬಳಿಕ ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್, ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೆ ಶೋಯಿಗು ಅವರೊಂದಿಗೆ ಅದ್ಭುತ ಸಭೆ ನಡೆದಿದ್ದು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದೆವು. ರಕ್ಷಣಾ ವಿಭಾಗದ ಕುರಿತು ಆಳವಾಗಿ ಚರ್ಚೆ ನಡೆಸಿದ್ದೇವೆ. ಎರಡೂ ದೇಶಗಳ ನಡುವೆ ಸ್ನೇಹ, ಸಂಬಂಧ ವೃದ್ಧಿಸುವ ಕುರಿತು ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *