ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

ಮಂಡ್ಯ: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಬಸಪ್ಪನ ಆಶೀರ್ವಾದ ಪಡೆದಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಬಸಪ್ಪನ ಆಶೀರ್ವಾದವನ್ನು ನಟಿ ಪಡೆದಿದ್ದಾರೆ. ಕಾಲಭೈರೇಶ್ವರ ದೇವಾಲಯ ಆವರಣದಲ್ಲಿರುವ ಬಸಪ್ಪ ಪವಾಡಗಳಿಗೆ ಹೆಸರುವಾಸಿಯಾಗಿದ್ದಾನೆ.

ನಡೆದಾಡುವ ದೇವರು ಎಂದೇ ಬಸಪ್ಪ ಪ್ರಸಿದ್ಧಿ ಪಡೆದಿದ್ದಾನೆ. ಬಸಪ್ಪನ ಆಶೀರ್ವಾದ ಪಡೆದರೆ ಇಷ್ಪಾರ್ಥ ಸಿದ್ದಿಯಾಗಲಿದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಇದೀಗ ಈ ಪವಾಡ ಬಸಪ್ಪನ ಆಶೀರ್ವಾದ ಪಡೆದು ನಟಿ ಪುನೀತರಾಗಿದ್ದಾರೆ.

Comments

Leave a Reply

Your email address will not be published. Required fields are marked *