ಪರಪ್ಪನ ಅಗ್ರಹಾರದಲ್ಲೂ ಅನಾರೋಗ್ಯದ ನಾಟಕವಾಡಿದ ಸಂಪತ್‍ರಾಜ್!

– ನಾರ್ಮಲ್ ಇದೆ ಎಂದು ಮತ್ತೆ ಜೈಲಿಗೆ ಕಳಿಸಿದ ವೈದ್ಯರು

ಬೆಂಗಳೂರು: ಅನಾರೋಗ್ಯದ ನಾಟಕವಾಡಿ ಜಯದೇವ ಆಸ್ಪತ್ರೆಗೆ ಸೇರಿದ್ದ ಮಾಜಿ ಮೇಯರ್ ಸಂಪತ್ ರಾಜ್ ಡ್ರಾಮಾ ಫೇಲ್ ಆಗಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಸಂಪತ್ ರಾಜ್ ನನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಹಿನ್ನೆಲೆ ನವೆಂಬರ್ 20ರಂದು ಸಂಪತ್ ರಾಜ್ ಪರಪ್ಪರ ಅಗ್ರಹಾರ ಸೇರಿದ್ದರು. ಜೈಲು ಸೇರಿದ ಒಂದೇ ದಿನಕ್ಕೆ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಭಾನುವಾರ ಜೈಲಾಧಿಕಾರಿಗಳು ಸಂಪತ್ ರಾಜ್ ಅವರನ್ನ ಜಯದೇವ ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಸುಮಾರು ಒಂದೂವರೆ ಗಂಟೆಗಳ ಕಾಲ ಪರೀಕ್ಷೆ ನಡೆಸಿದರು. ವೈದ್ಯಕೀಯ ವರದಿಯಲ್ಲಿ ಆರೋಗ್ಯದ ಸ್ಥಿತಿ ನಾರ್ಮಲ್ ಆಗಿದೆ ಅಂತ ಬಂದಿದೆ. ಎಲ್ಲವೂ ನಾರ್ಮಲ್ ಇರೋದ್ರಿಂದ ಅಡ್ಮಿಟ್ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದರು.

ಈ ಮೂಲಕ ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿರುವ ಪ್ಲಾನ್ ಮಾಡಿಕೊಂಡಿದ್ದ ಸಂಪತ್ ರಾಜ್ ಲೆಕ್ಕಾಚಾರ ತಲೆಕೆಳಗಾದಂತಾಗಿದೆ. ಬಿಪಿ ಮತ್ತು ಸಕ್ಕರೆ ಕಾಯಿಲೆಯಿಂದ ಸಹ ಸಂಪತ್ ರಾಜ್ ಬಳಲುತ್ತಿದ್ದಾರೆ.

Comments

Leave a Reply

Your email address will not be published. Required fields are marked *