ಪಬ್ಲಿಕ್ ಹೀರೋ, ಯೋಗ ಸಾಧಕಿ ತನುಶ್ರೀಗೆ ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಗರಿ

ಉಡುಪಿ: ಯೋಗ ಸಾಧಕಿ, ಪಬ್ಲಿಕ್ ಹೀರೋ ತನುಶ್ರೀ ಪಿತ್ರೋಡಿ, ಡ್ರಾಮ ಜೂನಿಯರ್ ಕಲಾವಿದೆ ಶ್ರಾವ್ಯ ಮರವಂತೆ ಸೇರಿದಂತೆ 36 ಸಾಧಕರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ರಾಜ್ಯೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ನಾಲ್ಕು ಸಂಘಸಂಸ್ಥೆ ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗಿದೆ. 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಗೊಂಡವರ ವಿವರ ಇಲ್ಲಿದೆ.

ದೈವಾರಾಧನೆ: ಶ್ರೀರಂಗ ಪಾಣಾ, ಮೋಂಟು ಪಾಣರ, ಮಂಜುನಾಥ ಶೇರಿಗಾರ.
ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್, ವಸಂತ ಪೂಜಾರಿ ಮುನಿಯಾಲು, ದಿನಕರ ಭಂಡಾರಿ ಕಣಜಾರು
ಸಾಹಿತ್ಯ: ನವೀನ್ ಸುವರ್ಣ ಪಡ್ರೆ
ಯಕ್ಷಗಾನ: ಸುದರ್ಶನ ಉರಾಳ, ಶಶಿಕಲಾ ಪ್ರಭು, ನಾಗೇಶ್ ಗಾಣಿಗ
ಪತ್ರಿಕೋದ್ಯಮ: ಉದಯ ಶಂಕರ ಪಡಿಯಾರ್, ಆರ್ ಶ್ರೀಪತಿ ಹೆಗಡೆ ಹಕ್ಲಾಡಿ
ಶೈಕ್ಷಣಿಕ: ಡಾ ಕೆ ಗೋಪಾಲಕೃಷ್ಣ ಭಟ್, ಡಾ ಸುಧಾಕರ ಶೆಟ್ಟಿ, ಡಾ ಸುಧೀರ್ ರಾಜ್ ಕೆ
ಸಂಕೀರ್ಣ: ಪೂರ್ಣಿಮಾ ಜನಾರ್ದನ್ ಕೊಡವೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಹರಿಪ್ರಸಾದ್ ರೈ
ಯೋಗ : ಶೇಖರ ಕಡ್ತಲ
ಕಲೆ (ಕರಕುಶಲ): ಬಾಬು ಕೊರಗ
ಕಲೆ ಕಾಷ್ಟ ಶಿಲ್ಪ: ಶ್ರೀಪತಿ ಆಚಾರ್ಯ


ಕಲೆ, ಪೆನ್ಸಿಲ್ ಲೆಡ್ ಕಲೆ : ಸುರೇಂದ್ರ
ಕಲೆ (ಶಿಲ್ಪಕಲೆ): ರಾಧಾ ಮಾಧವ ಶೆಣೈ
ವೈದ್ಯಕೀಯ : ಡಾ ಎಂ ರವಿರಾಜ್ ಶೆಟ್ಟಿ
ಸಂಗೀತ: ಪ್ರಕಾಶ್ ದೇವಾಡಿಗ, ಮಾಯಾ ಕಾಮತ್
ನೃತ್ಯ: ವಿಧೂಷಿ ಯಶ ರಾಮಕೃಷ್ಣ, ಕಿಶೋರ್ ದೇವಾಡಿಗ
ಸಮಾಜಸೇವೆ: ಇಮ್ತಿಯಾಝ್, ಕೂಸ ಕುಂದರ್, ಜಯಂತ್ ರಾವ್, ನಾರಾಯಣ ಮೂರ್ತಿ
ಕ್ರೀಡೆ: ಶರತ್ ಶೆಟ್ಟಿ, ನಾಗಶ್ರೀ ಗಣೇಶ್ ಶೇರುಗಾರ
ಬಾಲಪ್ರತಿಭೆ: ತನುಶ್ರೀ ಪಿತ್ರೋಡಿ, ಕು. ಶ್ರಾವ್ಯ ಮರವಂತೆ
ಸಂಘ ಸಂಸ್ಥೆ: ಸ್ವಚ್ಚ್ ಭಾರತ್ ಫ್ರೆಂಡ್ಸ್ ಉಡುಪಿ, ಉಮಾಮಹೇಶ್ವರ ಭಜನಾ ಮಂದಿರ ಅಂಬಲಪಾಡಿ, ಉಡುಪಿ, ದುರ್ಗಾಪರಮೇಶ್ವರಿ ಫ್ರೇಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ, ವೆಂಕಟರಮಣ ಸ್ಪೋಟ್ರ್ಸ್ & ಕಲ್ಚರಲ್ಸ್ ಪಿತ್ರೋಡಿ ಉದ್ಯಾವರ.

Comments

Leave a Reply

Your email address will not be published. Required fields are marked *