ಪತ್ನಿಯನ್ನ ಕೊಂದು ಕುಟುಂಬಸ್ಥರಿಗೆ ಸುದ್ದಿ ತಿಳಿಸಿದ ಪತಿ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಪತಿಯೋರ್ವ ಪತ್ನಿಯನ್ನ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ. ಪತ್ನಿಯನ್ನ ಕೊಂದ ಬಳಿಕ ಕುಟುಂಬಸ್ಥರಿಗೆ ತಾನೇ ವಿಷಯ ತಿಳಿಸಿದ್ದಾನೆ.

ವಿದ್ಯಾ ಕೇಶಪ್ಪನವರ್ ಕೊಲೆಯಾದ ಮಹಿಳೆ. ಇಂದು ಬೆಳಗ್ಗೆ ಔಷಧಿ ಕೊಡಿಸುವುದಾಗಿ ಹೇಳಿ ಪತ್ನಿಯನ್ನ ನಿಂಗಪ್ಪ ಕೇಶಪ್ಪನವರ್ ಮನೆಯಿಂದ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಹುಬ್ಬಳ್ಳಿ ಹೊರವಲಯದ ದೇವರಗುಡಿಹಾಳದ ಬಳಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾನೆ.

ಹುಬ್ಬಳ್ಳಿಯ ಪರಸಾಪುರ ಗ್ರಾಮದ ನಿಂಗಪ್ಪ ಕೇಶಪ್ಪನವರ ಹಾಗೂ ವಿದ್ಯಾಳ ಮದುವೆಯಾಗಿ ಐದಾರು ವರ್ಷಗಳು ಕಳೆದಿದೆ. ಇಬ್ವರಿಗೂ ನಾಲ್ಕು ವರ್ಷದ ಮುದ್ದಾದ ಮಗು ಕೂಡಾ ಇದೆ. ಆದ್ರೆ ನಿಂಗಪ್ಪ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಇದೇ ವಿಚಾರವಾಗಿ ದಂಪತಿ ಮಧ್ಯೆ ಪದೇ ಪದೇ ಜಗಳ ಸಹ ನಡೆಯುತ್ತಿತ್ತು. ಪತ್ನಿಯ ಕಿರಿಕಿರಿ ತಾಳದೇ ಪತ್ನಿ ಹೊಟ್ಟೆನೋವು ಎಂದು ಹೇಳಿದ್ದಕ್ಕೆ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಕೊಲೆ ಮಾಡಿದ್ದಾನೆ.

ನಿನ್ನೆ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡ ಹೋದ ನಂತರ ಆರೋಪಿ ಪತಿ ನಿಂಗಪ್ಪ ಪತ್ನಿಯನ್ನ ಕೊಲೆ ಮಾಡಿ ಪತ್ನಿಯ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾನೆ. ಅಲ್ಲದೇ ಪೊಲೀಸರ ವಿಚಾರಣೆ ವೇಳೆ ತಾನೇ ಪತ್ನಿಯನ್ನ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನಂತೆ. ಹೀಗಾಗ ಗರ್ಬೀಣಿಯಾಗಿದ್ದ ವೇಳೆಯೇ ಪತ್ನಿಯನ್ನ ಕೊಲೆ ಮಾಡಿರುವ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ವಿದ್ಯಾಳ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆಯಲ್ಲಿ ಮಗ ಮತ್ತು ಸೊಸೆ ಚೆನ್ನಾಗಿಯೇ ಇದ್ದರು. ಸೊಸೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಬೆಳಗ್ಗೆ ಸಹ ದಂಪತಿ ನಡುವೆ ಯಾವುದೇ ಗಲಾಟೆ ಆಗಿರಲಿಲ್ಲ. ಆದ್ರೆ ಮಾರ್ಗ ಮಧ್ಯೆ ಸೊಸೆಯನ್ನು ಮಗ ಕೊಂದಿರುವ ವಿಷಯ ಕೇಳಿ ಗಾಬರಿ ಆಯ್ತು ಎಂದು ನಿಂಗಪ್ಪನ ತಾಯಿ ಗೌರವ್ವ ಹೇಳಿದ್ದಾರೆ.

ಘಟನೆ ಸಂಬಂಧ ಪೊಲೀಸರು ಆರೋಪಿ ನಿಂಗಪ್ಪನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *