ಪತಿಯ ಅಣ್ಣನಿಂದ ಲೈಂಗಿಕ ಕಿರುಕುಳ- ಆತ್ಮಹತ್ಯೆಗೆ ಶರಣು

ಅಮರಾವತಿ: ಪತಿಯ ಅಣ್ಣ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ಮನನೊಂದ ಮಹಿಳೆ ಆತ್ಮಹತ್ಯೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಡೆದಿದೆ.

ಗೋದಾವರಿಯ ಪೆರುಪಾಳ್ಯಂದ ಸುರೇಖಾ ಮೃತ ಮಹಿಳೆ. 12 ವರ್ಷಗಳ ಹಿಂದೆ ಶ್ರೀನಿವಾಸ್ ರಾವ್‍ನನ್ನು ಮದುವೆಯಾಗಿ ತಡೆಪಲ್ಲಿಯ ಉಂದಾವಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.

ಸುರೇಖಾ ಪತಿ ಶ್ರೀನಿವಾಸ್ ಫೋಟೋಗ್ರಾಫರ್ ಆಗಿದ್ದು, ಮುಗ್ಧ ಸ್ವಭಾವದವರಾಗಿದ್ದರು. ಕೆಲಸದ ನಿಮಿತ್ತ ಹೆಚ್ಚಾಗಿ ಮನೆಯಿಂದ ಹೊರಗೆ ಇರುತ್ತಿದ್ದರು. ಈ ವೇಳೆ ಶ್ರೀನಿವಾಸ್ ಸಹೋದರ ಶಿವಶಂಕರ್ ತಮ್ಮನ ಪತ್ನಿಯ ಮೇಲೆ ಕಣ್ಣು ಹಾಕಿದ್ದನು. ಸುರೇಖಾಗೆ ನಿರಂತರವಾಗಿ ಕಿರುಕುಳವನ್ನು ನೀಡುತ್ತಿದ್ದನು. ಸುರೇಖಾ ಮಕ್ಕಳಿಗೆ ಈ ವಿಚಾರವನ್ನು ಎಲ್ಲೂ ಹೇಳದಂತೆ ಬೆದರಿಕೆ ಹಾಕುತ್ತಿದ್ದನು. ಇದರಿಂದ ಮನನೊಂದ ಸುರೇಖಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸುರೇಖಾರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಕ್ಕಳು ತಬ್ಬಲಿಗಳಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸುರೇಖಾ ಸಾವಿಗೆ ಶಿವಶಂಕರ್ ಕಾರಣ ಎಂದ ಸಂಬಂಧಿಕರು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *