ನೆರೆ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ಮುಂದೆ ಅಹೋರಾತ್ರಿ ಧರಣಿ

ಹಾವೇರಿ: ನೆರೆ ಹಾಗೂ ಅತಿಯಾದ ಮಳೆಯಿಂದಾಗಿ ಬಿದ್ದಿದ್ದ ಮನೆಗಳಿಗೆ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಹಾವೇರಿ ತಾಲೂಕಿನ ಹೊಸಕಿತ್ತೂರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಗ್ರಾಮಸ್ಥರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

ಕೊರಡೂರು ಗ್ರಾಮದ ಅಂಬೇಡ್ಕರ್ ಕಾಲೋನಿ ನಿವಾಸಿಗಳು ಅಹೋರಾತ್ರಿ ಧರಣಿಗೆ ಮುಂದಾದವರು. ಕಳೆದ 2019ರಲ್ಲಿನ ಅತಿವೃಷ್ಟಿ ಮತ್ತು 2020ರಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗಳು ಬಿದ್ದು ಹೋಗಿ ನಷ್ಟ ಅನುಭವಿಸಿದ್ದರು.

ಗ್ರಾಮದ 25ಕ್ಕೂ ಅಧಿಕ ಕುಟುಂಬಗಳು ಅತಿವೃಷ್ಟಿ ಮತ್ತು ಮಳೆಯಿಂದ ಮನೆಯನ್ನು ಕಳೆದುಕೊಂಡು ನಷ್ಟಕ್ಕೆ ತುತ್ತಾಗಿ ಎರಡು ವರ್ಷ ಕಳೆದರು ಈವರೆಗೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳಿಗೆ ಹಾಗೂ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರೂ ಪರಿಹಾರ ಸಿಕ್ಕಿರಲಿಲ್ಲ. ಹಾಗಾಗಿ ಕುಟುಂಬ ಸಮೇತ ಪಂಚಾಯತ್ ಕಚೇರಿ ಎದುರು ಅಡುಗೆ ತಯಾರಿಸಿ, ಊಟ ಮಾಡಿ ಧರಣಿ ನಡೆಸುವ ಮೂಲಕ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪರಿಹಾರ ಸಿಗುವವರೆಗೂ ನಿರಂತರ ಧರಣಿ ಮಾಡಲು ಫಲಾನುಭವಿಗಳು ನಿರ್ಧರಿಸಿದ್ದಾರೆ.

Comments

Leave a Reply

Your email address will not be published. Required fields are marked *