ನೀರು ಕುಡಿಯಲು ನದಿಗೆ ಇಳಿದ ಎಮ್ಮೆಯನ್ನ ಹೊತ್ತೊಯ್ದ ಮೊಸಳೆ

– ಲೈವ್ ವೀಡಿಯೋ ಮಾಡಿದ ಗ್ರಾಮಸ್ಥರು

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ಮೊಸಳೆಯೊಂದು ಎಮ್ಮೆಯನ್ನ ಹೊತ್ತೊಯ್ದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿಮ ಶೂರ್ಪಾಲಿ ಗ್ರಾಮಬಳಿ ನಡೆದಿದೆ.

ಕೃಷ್ಣಾ ನದಿ ದಡದ ಗ್ರಾಮವಾಗಿರುವ ಶೂರ್ಪಾಲಿ ಗ್ರಾಮದಲ್ಲಿ ಎಮ್ಮೆಯೊಂದು ಬುಧವಾರ ಕೃಷ್ಣಾ ನದಿಯಲ್ಲಿ ನೀರು ಕುಡಿಯಲು ಹೋಗಿದೆ. ನದಿ ದಡದಲ್ಲೇ ದಾಳಿಗೆ ಹೊಂಚುಹಾಕಿ ಕುಳಿತಿದ್ದ ಮೊಸಳೆ, ನೀರು ಕುಡಿಯಲು ನದಿಗೆ ಹೋದ ಎಮ್ಮೆಯನ್ನ ಎಳೆದೊಯ್ದಿದೆ.

ಮೊಸಳೆ ಎಮ್ಮೆಯನ್ನ ಎಳೆದೊಯ್ಯುವ ದೃಶ್ಯವನ್ನ ಗ್ರಾಮಸ್ಥರು ತಮ್ಮ ಮೊಬೈಲ್‍ನಲ್ಲಿ ಲೈವ್ ವೀಡಿಯೋ ಮಾಡಿ ಸೆರೆ ಹಿಡಿದಿದ್ದಾರೆ. ಪ್ರತೀ ವರ್ಷ ಬೇಸಿಗೆ ಆರಂಭವಾಗ್ತಿದ್ದಂತೆ ನದಿದಡದ ಗ್ರಾಮಸ್ಥರಿಗೆ ಮೊಸಳೆ ದಾಳಿ ತಲೆ ನೋವಾಗಿ ಪರಿಣಮಿಸುತ್ತೆ.

ಪ್ರತಿವರ್ಷವು ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗ್ತಿದ್ದಂತೆ ಮೊಸಳೆಗಳು ಪ್ರಾಣಿಗಳು ಹಾಗೂ ಮನುಷ್ಯರ ಮೇಲೆ ದಾಳಿ ನಡೆಸಿರುವ ಉದಾಹರಣೆಗಳಿವೆ. ಸದ್ಯ ನದಿಯಲ್ಲಿ ನೀರು ಕಡಿಮೆಯಾಗಿದ್ರಿಂದ ಕೃಷ್ಣಾ ನದಿಯಲ್ಲಿ ಮತ್ತೆ ಮೊಸಳೆಗಳ ಹಾವಳಿ ಹೆಚ್ಚಾಗಿದೆ. ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಶೂರ್ಪಾಲಿ, ಕಂಕನವಾಡಿ ಹಾಗೂ ಮುತ್ತೂರು ಗ್ರಾಮಸ್ಥರಿಗೆ ಮೊಸಳೆ ದಾಳಿ ಆತಂಕ ಮೂಡಿಸಿದೆ.

Comments

Leave a Reply

Your email address will not be published. Required fields are marked *