ನೀರಿನ ರಭಸಕ್ಕೆ ಕುಸಿದ ಸೇತುವೆ- ಮೂರು ಗ್ರಾಮಗಳ ಸಂಪರ್ಕ ಕಡಿತ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ಸಮೀಪದ ಬಿಳಿಗಿರಿಯಲ್ಲಿ ಸೇತುವೆ ಕುಸಿದಿದೆ.

ಈ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಮೂರು ಗ್ರಾಮಗಳ ನೂರಕ್ಕೂ ಹೆಚ್ಚು ಮನೆಗಳು ಸಂಪರ್ಕ ಕಡಿತಗೊಂಡಿದೆ. ಸೇತುವೆ ದಾಟಲು ಗ್ರಾಮಸ್ಥರು ತಾತ್ಕಾಲಿಕವಾಗಿ ಮರದ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಕೆಳಗೆ ರಭಸವಾಗಿ ನೀರು ಹರಿಯೋದನ್ನ ನೋಡಿದ್ರೆ ಸೇತುವೆ ದಾಟಲು ಒಂದು ಕ್ಷಣ ಭಯವಾಗುತ್ತದೆ.

ನದಿಯಲ್ಲಿ ಹೂಳು ಎತ್ತದ ಕಾರಣ ಸೇತುವೆ ಕುಸಿದಿದೆ. ಸರ್ಕಾರದ ನಿರ್ಲಕ್ಷ್ಯವೇ ಸೇತುವೆ ಕುಸಿಯಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಗತ್ಯ ವಸ್ತುಗಳಿಗಾಗಿ ಸೇತುವೆ ದಾಟಿ ಹೋಗುವುದು ಅನಿವಾರ್ಯವಾಗಿದೆ. ಸ್ಥಳೀಯರು ಭಯದಲ್ಲೇ ಸೇತುವೆ ದಾಟುತ್ತಿದ್ದಾರೆ.

ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಯ ಬೆಟ್ಟದ ಸಾಲು ಕುಸಿದು ಆರ್ಚಕರ ಕುಟುಂಬ ಭೂ ಸಮಾಧಿಯಾಗಿದ್ದ ಸ್ಥಳದಲ್ಲಿ ಮೃತ ದೇಹಗಳ ಪತ್ತೆ ಕಾರ್ಯಕ್ಕೆ ಮಳೆ ಅಡ್ಡಿಯಾಗುತ್ತಿದೆ. ಬೆಳಗ್ಗಿನಿಂದ ಎರಡು ತಾಸು ಪತ್ತೆ ಕಾರ್ಯಚರಣೆ ನಡೆಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಮಳೆ ಹೆಚ್ಚಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

Comments

Leave a Reply

Your email address will not be published. Required fields are marked *