ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು – ಮೊಮ್ಮಗನ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ಅಜ್ಜಿ

ಮಡಿಕೇರಿ: ನಾಪತ್ತೆಯಾಗಿದ್ದ ಮೊಮ್ಮಗ ಶವವಾಗಿದ್ದಾನೆ ಎನ್ನುವ ಸುದ್ದಿ ತಿಳಿದು ವೃದ್ಧೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದಲ್ಲಿ ನಡೆದಿದೆ.

ತನ್ನ ಸ್ನೇಹಿತರೊಂದಿಗೆ ನಿನ್ನೆ ಆಟವಾಡಲೆಂದು ತೆರಳಿದ್ದ ವಿದ್ಯಾರ್ಥಿ ಮುಬಾಷೀರ್ (18) ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಸ್ನೇಹಿತರೊಂದಿಗೆ ಪ್ರಶ್ನಿಸಿದಾಗ ಸುಂಟಿಕೊಪ್ಪ ಸಮೀಪ ಹೊಸತೋಟದ ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕೆಂದು ನೀರಿಗಿಳಿದ ಮುಬಶೀರ್ ಮತ್ತೆ ಮೇಲೆ ಬಾರದೆ ಇರುವುದನ್ನು ತಿಳಿಸಿದ್ದಾರೆ.

ಮೊಮ್ಮಗ ನೀರು ಪಾಲಾದ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅಜ್ಜಿ ರುಕಿಯಾ(62) ಕುಸಿದು ಬಿದ್ದು ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ರಾತ್ರಿ ವೇಳೆ ಹಾರಂಗಿ ಹಿನ್ನೀರಿನಲ್ಲಿ ಮುಬಾಶೀರ್ ಮೃತದೇಹ ಹುಡುಕಾಡಲು ಸಾಧ್ಯವಾಗದ ಕಾರಣ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಮೃತದೇಹ ದೊರೆತಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *