ನೀರಿಕ್ಷೆಯಂತೆ ನಾವು ಯಾವ ಕೆಲಸನೂ ಮಾಡಿಲ್ಲ – ಬಿಎಸ್‍ವೈ ಬೇಸರ

ಕೊಪ್ಪಳ: ನೀರಿಕ್ಷೆಯಂತೆ ನಾವು ಯಾವ ಕೆಲಸನೂ ಮಾಡಿಲ್ಲ ಎಂದು ಕೊಪ್ಪಳ ತಾಲೂಕಿನಲ್ಲಿ ಬಸಾಪೂರಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕುಕನೂರು ತಾಲೂಕಿನ ಭಾನಾಪೂರ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಆಟಿಕೆ ಕ್ಲಸ್ಟರ್ ಭೂಮಿ ಪೂಜೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕೋವಿಡ್, ಅತಿವೃಷ್ಟಿ, ಬರಗಾಲದಿಂದ ಕೆಲಸ ಮಾಡಲು ಸಾಧ್ಯವಾಗಿಲ್ಲ. ರಾಜ್ಯದ ಅರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ಸರಿ ಇಲ್ಲದ ಕಾರಣದಿಂದಾಗಿ ಹೀಗಾಗಿದೆ. ಈ ಬಾರಿ ಬಜೆಟ್‍ನಲ್ಲಿ 40,50 ಸಾವಿರ ನಷ್ಟ ಆಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಮೊದಲ ಟಾಯ್ಸ್ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡ್ತಿದ್ದೇವೆ. ಕೆಲಸ ಆರಂಭ ಆದ ಬಳಿಕ ಪ್ರಧಾನಿ ಮೋದಿ ಕರೆಸಿ ಉದ್ಘಾಟನೆ ಮಾಡಬೇಕೆಂಬ ಅಪೇಕ್ಷೆ ಇದೆ. ಟಾಯ್ಸ್ ಕ್ಲಸ್ಟರ್‍ಗೆ ಭೂಮಿ ಪೂಜೆ ಮಾಡುವ ಮೂಲಕವಾಗಿ ಕೃಷಿ ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಸ್ವಾಭಿಮಾನಿ ರೈತ ಕಾರ್ಡ್ ವಿತರಣೆ ಮಾಡಲಾವುದು. ಕೇಂದ್ರ ಯಾವಾಗ ಹೇಳತ್ತೆ ಅವಾಗ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಎಸ್‍ವೈ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *