ನಿರಾಣಿಯಂತವರೇ ಸಿಎಂ ಆಗಬೇಕು: ಕೈ ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಮಾಜಿ ಸಚಿವ ಮುರುಗೇಶ್ ನಿರಾಣಿಯಂತವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದ ಮುಂದಿನ ಸಿಎಂ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದರು. ಯಡಿಯೂರಪ್ಪ ಚಾಮರಾಜನಗರಕ್ಕೆ ಬಾರದೆ ಅಧಿಕಾರ ಕಳೆದುಕೊಂಡಿದ್ದಾರೆ. ಬಂದಿದ್ದರೆ ಅಧಿಕಾರದಲ್ಲಿಯೇ ಉಳಿಯುತ್ತಿದ್ದರು. ಕೆಲ ದಿನಗಳ ಹಿಂದೆ ನಿರಾಣಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಅವರಿಗೆ ಚಾಮರಾಜೇಶ್ವರನ ಕೃಪೆ ಇದೆ ಎಂದರು. ಇದನ್ನೂ ಓದಿ: ಬಿಜೆಪಿಯ ಅದೃಷ್ಟದ ಹೋಟೆಲ್‍ನಲ್ಲಿ ನೂತನ ಸಿಎಂ ಆಯ್ಕೆ

ಶೆಟ್ರೆ..ನಿಮ್ಮ ಜಿಲ್ಲಾ ಉಸ್ತುವಾರಿ ಸಪ್ಪೆ, ಅವರಿಂದ ಏನೂ ಆಗುವುದಿಲ್ಲ. ನನ್ನನ್ನು ಕೇಳಿ ನಿಮಗೆ ಏನು ಬೇಕು ಮಾಡಿಕೊಡುತ್ತೇನೆ ಎಂದಿದ್ದರು. ನಿಜವಾಗಿಯೂ ನಿರಾಣಿಯಂತಹವರು ಸಿಎಂ ಆಗಬೇಕು. ಅವರು ಸಿಎಂ ಆದರೆ ಖಂಡಿತವಾಗಿಯೂ ಚಾಮರಾಜನಗರಕ್ಕೆ ಬರುತ್ತಾರೆ. ಬಂದರೆ ಹೆಚ್ಚು ಕಾಲ ಅಧಿಕಾರದಲ್ಲಿರುತ್ತಾರೆ. ಅವರನ್ನು ಚಾಮರಾಜನಗರಕ್ಕೆ ಕರೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ : ಯಡಿಯೂರಪ್ಪನವರ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದೆ: ಅರುಣ್ ಸಿಂಗ್

Comments

Leave a Reply

Your email address will not be published. Required fields are marked *