ನಾಳೆ ಈ ವರ್ಷದ ಕೊನೆಯ ಚಂದ್ರ ಗ್ರಹಣ – ಒಳಿತು, ಕೆಡುಕುಗಳು ಏನು?

ಬೆಂಗಳೂರು: ನಾಳೆ ಕಾರ್ತಿಕ ಗ್ರಹಣ ನಡೆಯಲಿದೆ. ವರ್ಷದ ಕೊನೆಯ ಚಂದ್ರ ಗ್ರಹಣದತ್ತ ಜನರ ಚಿತ್ತ ನೆಟ್ಟಿದೆ. ಹೀಗಾಗಿ ಈಗ ಗ್ರಹಣ ಒಳಿತೋ? ಕೆಡುಕೋ ಎಂಬುದರ ಬಗ್ಗೆ ಆನಂದ್ ಗುರೂಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

ಕಾರ್ತಿಕ ಹುಣ್ಣಿಮೆ ವರ್ಷದ ಕೊನೆಯ ಗ್ರಹಣ ತುಂಬಾ ವಿಶೇಷವಾಗಿದೆ. ಕೆಲವರು ಗ್ರಹಣ ಇದೆ ಅಂತಾರೆ, ಮತ್ತೆ ಕೆಲವೊಬ್ಬರು ಇಲ್ಲ ಎನ್ನುತ್ತಾರೆ. ಮಧ್ಯಾಹ್ನವಾದರೂ ಕೂಡಾ ಚಂದ್ರಗೆ ಗ್ರಹಣ ಹಿಡಿಯಲಿದೆ ಆದರೆ ನಮ್ಮ ದೇಶದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಅಮೆರಿಕಾದಲ್ಲಿ ಗ್ರಹಣ ಕಾಣುತ್ತದೆ

ಪ್ರಕೃತಿ ಮೇಲೆ ಗ್ರಹಣದ ಪರಿಣಾಮ:
ಚಂದ್ರನಿಗೆ ಕೆಲವು ಸಂಕಷ್ಟಗಳು ಇರುತ್ತವೆ ಮತ್ತು ಪ್ರಕೃತಿಯಲ್ಲಿ ಕೆಲವೊಂದಿಷ್ಟು ವೈಪರಿತ್ಯಗಳು ಆಗಲಿದೆ. ಈ ಗ್ರಹಣವು ನೈಸರ್ಗಿಕವಾಗಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಗ್ರಹಣವು ಸಮಸ್ಯೆಯನ್ನು ಹೊತ್ತು ಬರುತ್ತದೆ. ವರ್ಷದ ಕಡೆಯ ಗ್ರಹಣ ಇದಾಗಿದೆ. ಹೀಗಾಗಿ ಎಚ್ಚರಿಕೆವಹಿಸಬೇಕಾಗಿರುವುದು ಅಗತ್ಯವಾಗಿದೆ.

ಯಾರು ಎಚ್ಚರದಲ್ಲಿರಬೇಕು?
ಗೃಹಿಣಿಯರು ತುಂಬಾ ಎಚ್ಚರಿಕೆಯಿಂದ ಇರಬೇಕು. ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಗ್ರಹಣದಿಂದಾಗಿ ವಿಶೇಷ ಗುಣ ಉಳ್ಳವರು, ಪ್ರಮುಖರನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

ಏನು ಮಾಡಬೇಕು:
ಕೊರೋನಾ ಎರಡನೇ ಅಲೆ ಅಷ್ಟು ತೀವ್ರವಾಗಿರಲ್ಲ. ಆದರೂ ಎಚ್ಚರಿಕೆ ವಹಿಸಬೇಕು. ಯೋಗ, ಧ್ಯಾನ ಮಾಡುವುದರ ಜೊತೆ ಗ್ರಹಣದ ವೇಳೆ ಚಂದ್ರಶೇಖರ ಮತ್ತು ಶಿವನನ್ನು ಆರಾಧಿಸಬೇಕು. ಗ್ರಹಣದ ಬಳಿಕ ಶಿವ ದೇವಾಲಯಕ್ಕೆ ಹೋಗಬೇಕು.

Comments

Leave a Reply

Your email address will not be published. Required fields are marked *