ನಾನು ಏನೂ ಮಾತಾಡಲ್ಲ: ಸಂಜನಾ ಗಲ್ರಾನಿ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಅವಶ್ಯಕತೆಯಿದ್ದಾಗ ಖಂಡಿತಾ ಮಾತಾಡುತ್ತೇನೆ. ಈಗ ಏನೂ ಮಾತನಾಡಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ. ನಟಿಯ ಆಪ್ತ ರಾಹುಲ್‍ನನ್ನ ಸಿಸಿಬಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಜನಾ, ನಿಜವಾಗಲೂ ಅವಶ್ಯಕತೆಯಿದ್ದಾಗ ನಾನೇ ಮಾತಾಡುತ್ತೇನೆ. ಅವಶ್ಯಕತೆ ಇರುವಾಗ ಖಂಡಿತಾ ಮಾತನಾಡುತ್ತೇನೆ. ಅಲ್ಲಿಯವರೆಗೂ ನಾನೂ ಏನು ಮಾತನಾಡಲ್ಲ. ನಾನೇ ಆರಾಮಾಗಿದ್ದೀನಿ. ದಯವಿಟ್ಟು ಡಿಸ್ಟರ್ಬ್ ಮಾಡಿ ಎಂದಿದ್ದಾರೆ. ಇನ್ನು ಸಂಜನಾರ ವಾಟ್ಸಪ್ ಮೂಲಕ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನ ತಳ್ಳಿ ಹಾಕಿದ್ದು, ಸುಳ್ಳು ಎಂದಿದ್ದಾರೆ.

ಬುಧವಾರ ರಾತ್ರಿಯೇ ಸಂಜನಾರ ಆಪ್ತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ರಾಹುಲ್ ಡ್ರಗ್ಸ್ ಸರಬರಾಜು ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ಮತ್ತೊಂದು ನಟಿ ರಾಗಿಣಿ ದ್ವಿವೇದಿ ಅವರ ಆಪ್ತ ರವಿಶಂಕರ್ ಸಹ ಸಿಸಿಬಿ ವಶದಲ್ಲಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ರಾಗಿಣಿ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ. ರವಿ ಶಂಕರ್ ನನ್ನು ವಶಕ್ಕೆ ಪಡೆಯುತ್ತಿದ್ದಂತೆ ನಟಿ ರಾಗಿಣಿ ವಕೀಲರ ಮೊರೆ ಹೋಗಿದ್ದು, ವಿಚಾರಣೆ ಎದುರಿಸುವ ಕುರಿತು ಸಲಹೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ

Comments

Leave a Reply

Your email address will not be published. Required fields are marked *