ನಂದಿ ತಪ್ಪಲಿನಲ್ಲಿ ವಿಜೃಂಭಣೆಯಿಂದ ನೆರವೇರಿದ ಭೋಗನಂದೀಶ್ವರ ರಥೋತ್ಸವ

ಚಿಕ್ಕಬಳ್ಳಾಪುರ: ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದ ತಪ್ಪಲಿನಲ್ಲಿರುವ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ನಂದಿ ಗ್ರಾಮದ ಭೋಗ ನಂದೀಶ್ವರನ ಜೋಡಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶತಮಾನಗಳ ಇತಿಹಾಸವಿರುವ ನಂದಿಯ ಭೋಗ ನಂದೀಶ್ವರನ ದೇವಾಲಯದ ಜೋಡಿ ಬ್ರಹ್ಮ ರಥೋತ್ಸವ ಮಹಾಶಿವರಾತ್ರಿ ಹಬ್ಬದ ಮಾರನೇ ದಿನ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ದೇಶದ ಬೆರಳೆಣಿಕೆಯಷ್ಟು ಕಲ್ಲಿನ ರಥಗಳಲ್ಲಿ ನಂದಿಯ ಭೋಗನಂದೀಶ್ವರನ ರಥವೂ ಒಂದಾಗಿದ್ದು, ಹರಕೆ ಹೊತ್ತ ಭಕ್ತರು ತೇರು ಏಳೆದು, ಹರಿಕೆಗಳನ್ನ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ತೇರು ಎಳೆದರು.

Comments

Leave a Reply

Your email address will not be published. Required fields are marked *