ಧರ್ಮಸ್ಥಳದಲ್ಲಿ ಭಜನಾ ಸಾಮ್ರಾಟ್ ಸ್ಪರ್ಧೆ

ಉಜಿರೆ: ಭಜನೆಗೆ ಭಗವಂತನೇ ಸಾಮ್ರಾಟ್. ಶ್ರದ್ಧಾ-ಭಕ್ತಿಯ ಭಜನೆಯಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದಲ್ಲಿ ಶಂಕರ ಟಿ.ವಿ.ಯ ಆಶ್ರಯದಲ್ಲಿ ಶನಿವಾರ ಆಯೋಜಿಸಿದ ಭಜನಾ ಸಾಮ್ರಾಟ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಂಕರ ಟಿ.ವಿ.ಯವರು ಭಜನೆಯನ್ನು ವಿಶ್ವವ್ಯಾಪಿಯಾಗಿ ಪಸರಿಸಿ, ಮನೆ ಮಂದಿಯೆಲ್ಲ ಸೇರಿ ಭಜನೆಯ ಸೊಗಡನ್ನು ಆಸ್ವಾದಿಸುವಂತೆ ಮಾಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದ್ದಾರೆ. ನಿರ್ದೇಶಕಿ ಮಮತಾ ರಾವ್ ಸ್ವಾಗತಿಸಿದರು. ಬಿ. ಜಯರಾಮ ನೆಲ್ಲಿತ್ತಾಯ ಧನ್ಯವಾದ ಸಲ್ಲಿಸಿದರು. ಶಂಕರ ಟಿ.ವಿ.ಯ ಅಧಿಕಾರಿ ಅರವಿಂದ ಮತ್ತು ನಿತ್ಯಾ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *