ದೇಶಪಾಂಡೆ ಫೌಂಡೇಶನ್ ವೆಬಿನಾರ್ – ಗ್ರಾಮೀಣಾಭಿವೃದ್ಧಿ ಕುರಿತು ಅಮೀರ್ ಖಾನ್ ಮಾತು

ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ವತಿಯಿಂದ ಫೆಬ್ರವರಿ 11 ರಂದು ಆಯೋಜಿಸಲಾಗಿರುವ ವೆಬಿನಾರ್‍ನಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರು ಪಿಪಲ್ ಮೂವ್‍ಮೆಂಟ್ ಫಾರ್ ರೂರಲ್ ಡೆವಲಪ್‍ಮೆಂಟ್ (ಗ್ರಾಮೀಣಾಭಿವೃದ್ಧಿಗಾಗಿ ಜನರ ಚಳುವಳಿ) ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಫೆಬ್ರವರಿ 11 ರಂದು ಸಂಜೆ 6 ಗಂಟೆಗೆ ವೆಬ್ ನಾರ್ ನಡೆಯಲಿದ್ದು, ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಾ.ಗುರುರಾಜ್ ದೇಶಪಾಂಡೆ, ಪಾನಿ ಫೌಂಡೇಶನ್ ಸಹ-ಸಂಸ್ಥಾಪಕರಾಗಿರುವ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ಮತ್ತು ಪಾನಿ ಪ್ರತಿಷ್ಠಾನದ ಸಿಇಒ ಸತ್ಯಜಿತ್ ಭಟ್ಕಲ್‍ರವರು ವೆಬ್‍ನಾರ್‍ನ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದ್ದು, ನೋಂದಾಯಿತರಿಗೆ ವೆಬ್‍ನಾರ್‍ಗಾಗಿ ಜೂಮ್ ಲಿಂಕ್ ಕಳುಹಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ದೇವಕಿ ಪುರೋಹಿತ್ ಅವರನ್ನು 96234 68822ಗೆ ಸಂಪರ್ಕಿಸಬಹುದು ಎಂದು ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *