ದಲಿತರ ಹೆಸರಿನಲ್ಲಿ ಹಣ ಲೂಟಿ ಆಗಿದೆ : ಎಚ್. ವಿಶ್ವನಾಥ್

ಬೆಂಗಳೂರು: ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಪರಿಷತ್‍ನಲ್ಲಿ ಮಾತನಾಡಿದ ಎಚ್. ವಿಶ್ವನಾಥ್, ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ. ದಲಿತರ ಅಭಿವೃದ್ದಿಗೆ ಒಂದು ಲಕ್ಷ ಕೋಟಿ ಹಣ ನೀಡಲಾಗಿದೆ. ಆದರೆ ದಲಿತರಿಗೆ ಕೆಲಸಗಳು ಮಾತ್ರ ಇನ್ನೂ ಆಗಿಲ್ಲ. ಈ ಬಗ್ಗೆ ಸರ್ಕಾರ ಜನಪ್ರತಿನಿಧಿಗಳನ್ನ ಕರೆದು ಸಭೆ ಮಾಡಿ. ಯೋಜನೆಗಳನ್ನ ರೂಪಿಸಬೇಕು ಎಂದು ಆಗ್ರಹಿಸಿದರು.

ಈ ವಿಚಾರವಾಗಿ ಉತ್ತರ ನೀಡಿದ ಸಚಿವ ಕಾರಜೋಳ, 4 ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಸೈನಿಕ ಶಾಲೆ ಪ್ರಾರಂಭಕ್ಕೆ ಮಾತುಕತೆ ನಡೆಯುತ್ತಿದೆ. ಹಣ, ಭೂಮಿ ನಮ್ಮದು, ಮ್ಯಾನೇಜ್‍ಮೆಂಟ್ ಅವರದ್ದು 50% ದಲಿತ ಮಕ್ಕಳಿಗೆ ಸೀಟು ಕೊಡಬೇಕು ಎಂದು ನಿಯಮ ಮಾಡಲಾಗುತ್ತಿದೆ. ಶೀಘ್ರವೇ ಈ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

ಬೀದರ್ ಜಿಲ್ಲೆಯ ಪರಿಶಿಷ್ಟ ಜಾತಿ ಉಪಯೋಜನೆ, ಹಾಗೂ ಗಿರಿಜನ ಯೋಜನೆ ಅಡಿ 2019-20 – 2689 ಲಕ್ಷ ಮತ್ತು 1741 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. 2020-21 ರಲ್ಲಿ 1195.50 ಲಕ್ಷ ಮತ್ತು 876 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ವಾಸಿಸುವ ಕಾಲೋನಿಗಳನ್ನ ಮಾತ್ರ ಕೈಗೊಳ್ಳಲಾಗಿದೆ. ಬೇರೆ ಯಾವುದೇ ಕಾಲೋನಿಗಳ ಕಾಮಗಾರಿ ಕೈಗೆತ್ತುಕೊಂಡಿಲ್ಲ. ಎಸ್‍ಸಿ-ಎಸ್‍ಟಿ ಹಣ ಸರಿಯಾಗಿ ಉಪಯೋಗ ಆಗಬೇಕು ಎಂದು ಸದಸ್ಯ ಅರವಿಂದ್ ಕುಮಾರ್ ಹೇಳಿದರು.

ಈ ವೇಳೆ ಕೂಡಲೇ ಎದ್ದು ನಿಂತು ಮಾತನಾಡಿದ ಸಿಎಂ ಎಸ್‍ಸಿಪಿ-ಟಿಎಸ್‍ಪಿ ಹಣ 100% ಹಣ ಖರ್ಚಾದರೆ ಪ್ರತಿ ದಲಿತರಿಗೆ ಮನೆ ಕಟ್ಟಿಕೊಡಬಹುದು. ಯಾರು ನಿರುದ್ಯೋಗ ಇರದಂತೆ ನೋಡಿಕೊಳ್ಳಬಹುದು ಈಗ ಕೇವಲ 70% ಮಾತ್ರ ಖರ್ಚಾಗುತ್ತಿದೆ. ಸಂಪೂರ್ಣ ಖರ್ಚು ಮಾಡಿ ಎಂದು ಸಚಿವ ಕಾರಜೋಳರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಸಚಿವ ಕಾರಜೋಳ ಯಾವುದೇ ಹಣ ದುರುಪಯೋಗ ಆಗಿಲ್ಲ. ಅಂತಹ ಯಾವುದೇ ಪ್ರಕರಣ ಕಂಡು ಬಂದರೆ ಕೂಡಲೇ ತನಿಖೆ ಮಾಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

Comments

Leave a Reply

Your email address will not be published. Required fields are marked *