ತೂಗುದೀಪ ಫಾರ್ಮ್ ಹೌಸ್‍ನಲ್ಲಿ ‘ಸಾರಥಿ’ಯ ಎತ್ತಿನ ಬಂಡಿ ಸವಾರಿ

ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತೂಗುದೀಪ  ಫಾರ್ಮ್ ಹೌಸ್‍ನಲ್ಲಿ ವಿರಾಮದ ಸಮಯ ಕಳೆಯುತ್ತಿದ್ದಾರೆ. ಸದ್ಯ ಫಾರ್ಮ್ ಹೌಸ್‍ನಲ್ಲಿ ದರ್ಶನ್ ಎತ್ತಿನ ಬಂಡಿ ಸವಾರಿ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ವಿಡಿಯೋದಲ್ಲಿ ದರ್ಶನ್ ತಮ್ಮ ಆಪ್ತರೊಂದಿಗೆ ಎತ್ತಿನ ಬಂಡಿ ಸವಾರಿ ಮಾಡಿರುವುದನ್ನು ಕಾಣಬಹುದುದಾಗಿದೆ. ಅಲ್ಲದೇ ಸವಾರಿಯ ಬಳಿಕ ಎತ್ತುಗಳು ಮಸ್ತ್ ಆಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಧಾರವಾಡಕ್ಕೆ ಭೇಟಿ ನೀಡಿದ್ದ ನಟ ದರ್ಶನ್, ಮಾಜಿ ಸಚಿವ ವಿನಯ ಕುಲಕರ್ಣಿ ಹಾಲಿನ ಡೈರಿಗೆ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿ ಚಕ್ಕಡಿ ಸವಾರಿ ಮಾಡಿದ್ದರು. ಹಲವು ವರ್ಷಗಳಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ದರ್ಶನ್ ಸ್ನೇಹರಾಗಿದ್ದು, ಈ ಹಿನ್ನೆಲೆಯಲ್ಲಿ ಆಗಾಗ ದರ್ಶನ್ ಇಲ್ಲಿಗೆ ಭೇಟಿ ನೀಡುತ್ತಾರೆ. ಧಾರವಾಡ ನಗರದ ಹೊರ ವಲಯದಲ್ಲಿ ವಿನಯ ಕುಲಕರ್ಣಿ ಅವರ ಡೈರಿ ಇದೆ. ದರ್ಶನ್ ತಮ್ಮ ಭೇಟಿ ವೇಳೆ ವಿನಯ ಡೈರಿಯಿಂದ ಅವರು ಹಸು, ಮೇಕೆಗಳನ್ನು ಖರೀದಿ ಮಾಡಲು ಆಗಮಿಸಿರುವುದಾಗಿ ತಿಳಿಸಿದ್ದರು.

Comments

Leave a Reply

Your email address will not be published. Required fields are marked *