ತಾನು ಸಾಕಿದ್ದ ಎರಡು 2 ಆನೆಗಳಿಗೆ ಇಡೀ ಆಸ್ತಿಯನ್ನೇ ಬರೆದ

– ರೌಡಿಗಳಿಂದ ಮಾಲೀಕನ ಪ್ರಾಣ ಉಳಿಸಿದ್ದ ಆನೆ
– ನಾನು ಇಲ್ಲದಿದ್ದಾಗ ಹಸಿವಿನಿಂದ ಬಳಲಬಾರದು

ಪಾಟ್ನಾ: ಇತ್ತೀಚೆಗೆ ಕೇರಳದಲ್ಲಿ ಪಟಾಕಿ ತುಂಬಿದ್ದ ಪೈನಾಪಲ್ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿತ್ತು. ಆದರೆ ಬಿಹಾರದ ಪ್ರಾಣಿ ಪ್ರೇಮಿಯೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನು ತಾವು ಸಾಕಿದ್ದ ಎರಡು ಆನೆಗಳಿಗೆ ಕೊಟ್ಟಿದ್ದಾರೆ.

ಪಾಟ್ನಾದ ಮೊಹಮ್ಮದ್ ಅಖ್ತರ್ ಇಮಾಮ್ (50) ತಾವು ಸಾಕಿರುವ 20 ಮತ್ತು 15 ವರ್ಷ ವಯಸ್ಸಿನ ಎರಡು ಆನೆಗಳಿಗೆ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಕೊಟ್ಟಿದ್ದಾರೆ. ಅಲ್ಲದೇ ಅಖ್ತರ್ ಮೋತಿ ಮತ್ತು ರಾಣಿ ಎಂಬ ಹೆಸರಿನ ತನ್ನ ಎರಡು ಆನೆಗಳೊಂದಿಗೆ ವಾಸಿಸುತ್ತಿದ್ದಾರೆ.

“ಕುಟುಂಬ ಪರಂಪರೆಯಾಗಿ ಈ ಎರಡು ಆನೆಗಳು ನನಗೆ ಸಿಕ್ಕಿವೆ. ಮೋತಿ ಮತ್ತು ರಾಣಿ ನನ್ನ ಮಕ್ಕಳಂತೆ. ನನ್ನ ಬಾಲ್ಯದಿಂದಲೂ ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ಇಬ್ಬರು ನನ್ನ ಕುಟುಂಬ ಸದಸ್ಯರು. ನಾನು ಜೀವಂತವಾಗಿರದಿದ್ದಾಗ ಎರಡು ಆನೆಗಳು ಹಸಿವಿನಿಂದ ಬಳಲುವಂತಾಗಬಾರದು. ಹೀಗಾಗಿ ನನ್ನ 6.25 ಎಕರೆ ಭೂಮಿಯನ್ನು ಎರಡು ಆನೆಗಳಿಗೆ ವಿಲ್ ಬರೆದಿದ್ದೇನೆ” ಎಂದು ಅಖ್ತರ್ ತಿಳಿಸಿದರು.

ಎರಡು ಆನೆಗಳಲ್ಲಿ ಮೋತಿ ನನ್ನ ಜೀವವನ್ನು ಉಳಿಸಿದ್ದಾನೆ. ಮೋತಿ ಭೋಜಪುರ ಜಿಲ್ಲೆಯ ಶಹಪುರ್ ಪ್ರದೇಶಕ್ಕೆ ಮಾವುತನ ಜೊತೆಗೆ ಹೋಗಿದ್ದನು. ಅಲ್ಲಿ ಅವನು ಅನಾರೋಗ್ಯಕ್ಕೆ ಒಳಗಾಗಿದ್ದ. ಆತನಿಗೆ ಚಿಕಿತ್ಸೆ ನೀಡಲು ನಾನು ಅಲ್ಲಿಗೆ ಹೋದೆ. ಒಂದು ದಿನ ನಾನು ಅಲ್ಲಿ ನಿದ್ದೆ ಮಾಡುವಾಗ ಮೋತಿ ಜೋರಾಗಿ ಕೂಗಿಕೊಂಡ. ತಾನು ತಕ್ಷಣ ಎಚ್ಚರಕೊಂಡೆ, ಆಗ ಯಾರೋ ರೌಡಿಗಳು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ನನ್ನ ಜೀವವನ್ನು ಉಳಿಸಿಕೊಳ್ಳಲು ಓಡಿ ಹೋಗಿದ್ದೆ ಎಂದು ಅಖ್ತರ್ ನಡೆದ ಘಟನೆಯ ಬಗ್ಗೆ ವಿವರಿಸಿದರು.

ನನ್ನ ಸ್ವಂತ ಕುಟುಂಬ ಸದಸ್ಯರು ಪ್ರಾಣಿ ಕಳ್ಳಸಾಗಾಣಿಕೆದಾರರೊಂದಿಗೆ ಕೈಜೋಡಿಸಿದ್ದಾರೆ. ಈ ಆನೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಎರಡು ಆನೆಗಳಿಗೆ ನನ್ನ ಆಸ್ತಿಯನ್ನು ಬರೆದಿರುವುದರಿಂದ ನನ್ನ ಕುಟುಂಬ ಸದಸ್ಯರಿಂದ ನನಗೆ ಜೀವ ಭಯವಿದೆ ಎಂದು ಅಖ್ತರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖ್ತರ್ ವನ್ಯಜೀವಿ ವಾರ್ಡನ್ ಮತ್ತು ಪಾಟ್ನಾ ಪೊಲೀಸ್ ಮುಖ್ಯಸ್ಥರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.

ಸರ್ಕಾರ ಆನೆಯನ್ನು ರಕ್ಷಿಸಬೇಕು. ಇಲ್ಲವಾದರೆ ಮುಂದೆ ನಾವು ಆನೆಗಳು ಇದ್ದವು ಎಂದು ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಆನೆಗಳು ಆಹಾರವನ್ನು ಹುಡುಕಿಕೊಡು ಗ್ರಾಮಗಳಿಗೆ ಬರುತ್ತವೆ. ಹೀಗಾಗಿ ನಾವು ಕಾಡನ್ನ ಉಳಿಸಬೇಕು ಎಂದು ಸರ್ಕಾರದ ಬಳಿ ಅಖ್ತರ್ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *