ತಮಿಳುನಾಡಲ್ಲಿ ಆರ್ಭಟಿಸಿ ತಣ್ಣಗಾದ ನಿವಾರ್ – ರಾಜ್ಯದ ಹಲವೆಡೆ ಸಾಧಾರಣ ಮಳೆ ಸಂಭವ

ಬೆಂಗಳೂರು: ಬಂಗಾಳಕೊಳ್ಳಿಯಲ್ಲಿ ಸೃಷ್ಟಿಯಾದ ನಿವಾರ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡು ತಲ್ಲಣಗೊಂಡಿದೆ. ನಿನ್ನೆ ತಡರಾತ್ರಿ ಪುದುಚೇರಿ ಬಳಿ ತೀರ ದಾಟಿದ ನಿವಾರ್, ಇಂದು ತಣ್ಣಗಾಗಿದೆ. ಅದರೂ ಇನ್ನೆರಡು ದಿನ ಸೈಕ್ಲೋನ್ ಎಫೆಕ್ಟ್ ಕಾಡಲಿದೆ.

ಇಂದು ಸಹ ರಾಜ್ಯ ರಾಜಧಾನಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಇಡೀ ದಿನ ಜಿಟಿ ಜಿಟಿ ಮಳೆಗೆ ಬೆಂಗಳೂರು ಜನ ಹೈರಾಣಾಗಿದ್ದರು. ಇಂದು ಸಹ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಸಂಜೆ ವೇಳೆಗೆ ಕೊಂಚ ಬಿರುಸಿನ ಮಳೆಯಾಗಬಹುದು.

ನಿವಾರ್ ಚಂಡಮಾರುತದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಇಂದು ಸಹ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಸಿಲಿಕಾನ್ ಸಿಟಿಯಲ್ಲೂ ಮಳೆಯ ಅಬ್ಬರ ಮುಂದುವರಿಯಲಿದೆ. ನಾಳೆಯೂ ಸೈಕ್ಲೋನ್ ಎಫೆಕ್ಟ್ ಇರಲಿದ್ದು, ಹವಾಮಾನ ಇಲಾಖೆ ನಾಳೆಯವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.

Comments

Leave a Reply

Your email address will not be published. Required fields are marked *