ತನಿಖಾಧಿಕಾರಿ ಬರೋ ಮುನ್ನವೇ ಸಿಸಿಬಿ ಕಚೇರಿಗೆ ಬಂದ ಆರ್.ವಿ.ಯುವರಾಜ್

ಬೆಂಗಳೂರು: ತನಿಖಾಧಿಕಾರಿಗಳು ಬರೋ ಮುನ್ನವೇ ಸಿಸಿಬಿ ಕಚೇರಿಗೆ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಆರ್.ವಿ. ಯುವರಾಜ್ ಆಗಮಿಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಗೆ ಶುಕ್ರವಾರ ಸಿಸಿಬಿ ನೋಟಿಸ್ ನೀಡಿತ್ತು.

ಯುವರಾಜ್ ಬಂದಾಗ ಕಚೇರಿಯಲ್ಲಿ ಓರ್ವ ಸೆಂಟ್ರಿ ಇದ್ದರು. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸೆಂಟ್ರಿ, ಅವರ ಸೂಚನೆಯಂತೆ ಕಚೇರಿಗೆ ಮೊದಲ ಮಹಡಿಯ ಕೊಠಡಿಯಲ್ಲಿರುವಂತೆ ಹೇಳಿದ್ದಾರೆ. ವಿಚಾರಣೆಗೆ ಬಂದಿರುವ ಯುವರಾಜ್ ತನಿಖಾಧಿಕಾರಿಗಳಿಗಾಗಿ ಕಾಯುತ್ತಿದ್ದಾರೆ. ಕಚೇರಿಗೆ ಬಂದಾಗ ವಿಚಾರಣೆ ಬಳಿಕ ಮಾತನಾಡುತ್ತೇನೆ ಎಂದು ಯುವರಾಜ್ ಹೇಳಿದ್ದಾರೆ. ಯುವರಾಜ್ ಜೊತೆಗೆ ನಿರೂಪಕರಾದ ಅಕುಲ್ ಬಾಲಾಜಿ ಮತ್ತು ಸಂತೋಷ್ ಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. ಇಂದು ಬೆಳಗ್ಗೆ 11 ಗಂಟೆಗೆ ಇಬ್ಬರು ವಿಚಾರಣೆಗೆ ಹಾಜರಾಗಲಿದ್ದಾರೆ.

ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜೊತೆ ಯುವರಾಜ್ ಹೆಸರು ಕೇಳಿ ಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಹಿಂದೆ ಸಿಸಿಬಿ ಕಚೇರಿಗೆ ಆಗಮಿಸಿ ಯುವರಾಜ್ ತಮ್ಮ ಹೇಳಿಕೆ ದಾಖಲಿಸಿದ್ದರು.

Comments

Leave a Reply

Your email address will not be published. Required fields are marked *