ತಂದೆಯಾಗಿ ಕೋವಿಡ್ ಸಮಯದಲ್ಲಿ ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ: ಶಾಸಕ ಪ್ರೀತಂ ಗೌಡ

ಹಾಸನ: ಶಾಲೆ ಆರಂಭಕ್ಕೆ ಇದು ಸೂಕ್ತ ಸಮಯ ಅಲ್ಲ. ನಾನು ಒಬ್ಬ ತಂದೆಯಾಗಿ ನನ್ನ ಮಕ್ಕಳನ್ನು ಈ ಸಂದರ್ಭದಲ್ಲಿ ಶಾಲೆಗೆ ಕಳುಹಿಸಲ್ಲ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಕೂಡ ಇಬ್ಬರು ಮಕ್ಕಳಿದ್ದಾರೆ. ಇದು ನಾನು ಒಬ್ಬ ಪೋಷಕನಾಗಿ ಹೇಳುವ ಮಾತು ಅಷ್ಟೇ. ಸರ್ಕಾರ ಶಾಲೆ ಆರಂಭದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡರು ನಿರ್ದಾಕ್ಷಿಣ್ಯವಾಗಿ ನನ್ನ ಸಲಹೆ ತಿಳಿಸುತ್ತೇನೆ.

ನಾನು ಪೋಷಕನಾಗಿ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ಶಾಸಕನಾಗಿ ನಾನು ಸರ್ಕಾರದ ಮಾತನ್ನ ಕೇಳಿಸಿಕೊಳ್ಳುತ್ತೇನೆ. ಆದರೆ ನನಗೂ ಕುಟುಂಬ ಇದೆ. ಮೊದಲು ಕುಟುಂಬ, ನಂತರ ರಾಜಕೀಯ. ಜೀವ ಇದ್ದರೆ ಜೀವನ ನಡೆಯಲಿದೆ ಎಂದು ಶಾಸಕ ಪ್ರೀತಂಗೌಡ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *