ಡಿಕೆಶಿಗೆ ಶುರುವಾಗಿದ್ಯಾ ಫಿಯರ್ ಪಾಲಿಟಿಕ್ಸ್..?

ಬೆಂಗಳೂರು: ಉಪಚುನಾವಣಾ ಕಣ ರಂಗೇರುತ್ತಿದ್ದು, ಈ ಕದನದಲ್ಲಿ ಮಾತಿಗಿಂತ ಮೌನವೇ ಲೇಸಾಯ್ತಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

ಆರ್‍ಆರ್ ನಗರ ಬೈ ಎಲೆಕ್ಷನ್‍ನಲ್ಲಿ ಡಿಕೆಶಿ ಫುಲ್ ಸೈಲೆಂಟ್ ಆಗಿದ್ದಾರೆ. ಯಾರೆಷ್ಟೇ ಕೆಣಕಿದ್ರೂ ನೀವು ಸೈಲೆಂಟ್ ಆಗಿರಿ. ಕೆಲಸ ಮಾತ್ರ ಮಾಡಿ, ಮಾತನಾಡಬೇಡಿ ಅಂತ ಸಹೋದರ ಡಿ.ಕೆ ಸುರೇಶ್‍ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಫರ್ಮಾನ್ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನನ್ನ ಬಗ್ಗೆ ಮಾತಾಡಿದ್ರೆ ನಾನೇ ಉತ್ತರ ಕೊಡ್ತೀನಿ. ಆದರೆ ಬೇರೆಯವರು ಯಾರೂ ಮಾತನಾಡಬಾರದು. ಚುನಾವಣಾ ಸಮಯದಲ್ಲಿ ಮಾತಾಡಿ ರಬ್ ಮಾಡಿದ್ರೆ ಸುಮ್ಮನಿರಲ್ಲ. ಹೀಗಾಗಿ ಯಾರೂ ಮಾತನಾಡಬೇಡಿ ಎಂದಿದ್ದಾರೆ. ಆಪ್ತರಿಗೆ ಡಿಕೆಶಿ ಕಟ್ಟಪ್ಪಣೆಯ ಅಸಲಿಯತ್ತಿಗೆ ಕಾರಣ ಫಿಯರ್ ಪಾಲಿಟಿಕ್ಸ್ ಎನ್ನಲಾಗುತ್ತಿದೆ.

ಮಾತನಾಡಿ ಎಡವಟ್ಟು ಮಾಡಿಕೊಳ್ಳುವ ಬದಲು ಎದುರಾಳಿಗಳಿಗೆ ಮಾತನಾಡೋಕೆ ಬಿಟ್ಟು ಬಿಡೋಣ ಅನ್ನೋದು ಡಿಕೆಶಿ ಸ್ಟ್ರಾಟಜಿ. ಮಾತನಾಡಿ ರಾಜಕೀಯ ಏಟು ತಿನ್ನುವಂತಾಗಬಾರದು. ಹೀಗಾಗಿ ಯಾರು ಎಷ್ಟೇ ಕೆಣಕಿದರೂ ನೋ ರೆಸ್ಪಾನ್ಸ್ ಅನ್ನೋ ಫರ್ಮಾನನ್ನು ಡಿ.ಕೆ ಶಿವಕುಮಾರ್ ಹೊರಡಿಸಿದ್ದಾರೆ.

ಒಟ್ಟಾರೆ ರಾಜರಾಜೇಶ್ವರಿ ನಗರದಲ್ಲಿ ಕೈಪಾಳಯಕ್ಕೆ ಸೈಲೆಂಟ್ ವಾರ್ ಫರ್ಮಾನು ಹೊರಡಿಸಿದ್ದು ಎಲ್ಲರಿಗೂ ಕೀಪ್ ಸೈಲೆನ್ಸ್ ಅನ್ನೋ ಮೆಸೇಜ್ ಅಂತು ಪಾಸಾಗಿದೆ.

Comments

Leave a Reply

Your email address will not be published. Required fields are marked *