ಡಬಲ್ ಬ್ಯಾರಲ್ ಗನ್‍ನಿಂದ ಶೂಟೌಟ್- ನಡುರಸ್ತೆಯಲ್ಲೇ ಯುವಕನ ಕಗ್ಗೊಲೆ

– ಬೆಚ್ಚಿಬಿದ್ದ ಗ್ರಾಮಸ್ಥರು

ಹಾಸನ: ಡಬಲ್ ಬ್ಯಾರಲ್ ಗನ್‍ನಿಂದ ಯುವಕನೊಬ್ಬನನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಸೊಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 28 ವರ್ಷದ ಯುವಕ ಸ್ವಾಮಿ ಕೊಲೆಯಾದ ದುರ್ದೈವಿ. ರೂಪೇಶ್ ಎಂಬ ವ್ಯಕ್ತಿ ಹಳೇ ದ್ವೇಷದಿಂದ ಸ್ವಾಮಿಯನ್ನು ಕೊಲೆ ಮಾಡಿದ್ದಾನೆ. ಹತ್ಯೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾಡಹಗಲೇ ನಡೆದ ಶೂಟೌಟ್‍ಗೆ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದು ಪರಾರಿಯಾಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *